Sunday, November 28, 2010

ಏಕೆ ಅಮೇರಿಕ ಜನರಿಗೆ ಕೇಲಸ ಬೇಗ ಸಿಗುವುದಿಲ್ಲ?????????



ಒಬ್ಬ ಅಮೇರಿಕ ಮನುಷ್ಯ ಬೆಳೆಗ್ಗೆ ಹೇಳಲು ಗಡಿಯರದ ಅಲಾರಂ ೬ ಗಂಟೆಗೆ ಇಟ್ಟರೆ, ಆ ಗಡಿಯಾರ ಮೇಡ್ ಇನ್ ಚೀನಾ!

ಆತನು ಕಾಫೀ ಕುಡಿಯಲು ಬಳಸುವ ಕಪ್, ಮೇಡ್ ಇನ್ ಚೀನಾ! ಆತನು ಎಲೆಕ್ಟ್ರಿಕ್ ಶೆವರ್ ನಿಂದ ಶೇವ್ ಮಾಡಿಕೊಳ್ಳುತ್ತಾನೆ, ಆದೂ ಕೂಡ ಮೇಡ್ ಇನ್ ಫಿಲಿಪ್ಪಿನ್ಸ್ ನದ್ದು!

ಆತನು ಶರ್ಟ್ ಹಾಕಿಕೊಂಡ ಅದು ಮೇಡ್ ಇನ್ ಶ್ರೀಲಂಕ! ಅವನ ಜಿನ್ಸ್ ಡಿಜೈನರ್ ಸಿಂಗಪೋರ್ ನವರು! ಆತನು ಬಳಸುವ ಶೂ ವಿಎತ್ನಂ! ಆತನ ಬೆಳಗಿನ ತಿಂಡಿ ಬ್ರೆಡ್ ತಯಾರು ಮಾಡುವ ತೆವೆ ಮೇಡ್ ಇನ್ ಇಂಡಿಯಾ!

ಆತನ ಬೆಳಗಿನ ತಿಂಡಿ ಮುಗಿಸಿದ ನಂತರ ಒಂದು ಕ್ಯಾಲ್ಕ್ಲೇಟರ್ ಹಿಡಿದು ಇಂದಿನ ಖರ್ಚುಗಳನ್ನು  ಹಾಕುತ್ತಾನೆ, ಅದು ಮೇಡ್ ಇನ್ ಮೆಕ್ಸಿಕೊ!


ಅದಾದ ಮೇಲೆ ಆತನುತನ್ನ ಕೈ ಗಡಿಯಾರವನ್ನು ತೆಗೆದುಕೊಳ್ಳುತ್ತಾನೆ ಅದು ಮೇಡ್ ಇನ್ ತೈವಾನ್! ಆತನು ರೇಡಿಯೋ ಆನ್ ಮಾಡುತ್ತಾನೆ ಅದು ಮೇಡ್ ಇನ್ ಇಂಡಿಯಾ! ನಂತರ ಆತನು ಹೊರಗೆ ಓಡಾಡಲು , ಆತನು ಬಳಸುವ ಕಾರ ಮೇಡ್ ಇನ್ ಜರ್ಮನಿ! ಆ ಕಾರ್ ನಲ್ಲಿ ಗ್ಯಾಸ್ ತುಂಬಿರುತ್ತದೆ ಅದು ಮೇಡ್ ಇನ್ ಅರಬ್! ಆ ಕಾರ್ ಹೇರಿ ಒಂದು ಒಳ್ಳೆಯ ಕೆಲಸ ಹುಡುಕಲು ಪ್ರಾರಂಬಿಸುವುದು ಅಮೇರಿಕಾದಲ್ಲಿ!

ಮತ್ತೆ ಸಂಜೆ ಕೆಲಸ ಹುಡುಕಿ ಸೋತು ಕೆಲಸ ಸಿಗದೇ ಮನೆಗೆ ಇಂದಿರುಗುವನು, ಮನೆಯಲ್ಲಿ ಕಂಪ್ಯೂಟರ್ ಮುಂದೆ ಕೂತು ಮೈಲ್ಸ್  ಚೆಕ್ ಮಾಡುತ್ತಾನೆ ಅದು ಮೇಡ್ ಇನ್ ಮಲೈಷ್ಯ! ನಂತರ ಆತನು ಸ್ವಲ್ಪ ಹೊತ್ತು ವಿಶ್ರಮಿಸಲು ನಿರ್ದಾರ ಮಾಡುತ್ತಾನೆ, ಆತನು ಒಂದು ಮಧ್ಯದ ಶಿಷೆಯನ್ನು ಹಿಡಿದು, ಅದನ್ನು ಸೇವಿಸಲು ಶುರುಮಾಡುತ್ತಾನೆ, ಅದು ಮೇಡ್ ಇನ್ ಫ್ರಾನ್ಸ್! ನಂತರ ಆತನು ಟಿ.ವಿ. ಆನ್ ಮಾಡುತ್ತಾನೆ, ಅದು ಮೇಡ್ ಇನ್ ಕೊರಿಯಾ! ಇದಾದ ಮೇಲೆ ಆತನು ಚಿಂತಿಸುತ್ತಾನೆ ಇನ್ನೂ ಯಾಕೆ ನನಗೆ ಒಳ್ಳೆಯ ಕೆಲಸ ಸಿಗುತ್ತಿಲ್ಲ ಎಂದು?

ಈಗ ಆತನು ಕೆಲಸವನ್ನೂ ನಿರಿಕ್ಷಿಸುತ್ತಿದ್ದಾನೆ ಪ್ರೆಸಿಡೆಂಟ್ ಕಡೆಯಿಂದ, ಅದು ಮೇಡ್ ಇನ್ ಕಿನ್ಯಾ!


ಗೆಳೆಯರೇ ಈ ಮೂಲಕ ನಿಮಗೆ ತಿಲಿಸುವುದೆನಂದರೆ, ನಾವು ಮೊದಲು ನಮ್ಮ ವಸ್ತುಗಳನ್ನೂ ಬಳಸಿಕೊಳ್ಳಲು ಪ್ರಾರಂಬಿಸಬೇಕು, ನಮ್ಮದೇ ಆದ ವಸ್ತುಗಳನ್ನೂ ಕಂಡುಹಿಡಿದು, ನಮ್ಮ ಜನಗಳಿಗೆ ಕೆಲಸಗನ್ನು ಶ್ರುಷ್ಟಿಸಬೇಕು. "ಎಂದು ನಾವು ನಮ್ಮ ವಸ್ತುಗಳನ್ನೂ ಬಳಸಿಕೊಳ್ಳಲು ಪ್ರಾರಂಬಿಸುತ್ತೇವೋ ಅಂದು ನಾನು ನಮ್ಮ  ದೇಶದ ಅಭಿವೃಧ್ಧಿ ಪತ ಕಾಣಬಹುದು! " ಈ ಮಾತನ್ನು ನಮ್ಮ ದೇಶದ ಪಿತಾಮಹ ಮಹಾತ್ಮಾ ಗಾಂದಿ ಅಂದು ಹೇಳಿದ್ದರು, ಅದು ಇಂದು ಅಷ್ಟೇ ಸತ್ಯ!


*****************************ದಿ ಎಂಡ್ *****************************


Friday, November 26, 2010

ನಮ್ಮೆಲ್ಲರ ಜೀವನದ ಸತ್ಯ!!!!!


ಒಂದು ಕಡಲ ತೀರದ ಹಳ್ಳಿಯಲ್ಲಿ ಕೆಲವು ಮೀನುಗಾರರು ಜೀವಿಸುತ್ತಿದ್ದರು, ಅವರಲ್ಲಿ ಒಬ್ಬ ಮೀನುಗಾರನಿದ್ದ, ಅವನು ದಿನವು ಮೀನುಗಳನ್ನು ಹಿಡಿದು ಮಾರಿ ಜೀವನ ನಡೆಸಬೇಕಿತ್ತು. ಒಂದು ದಿನ ಒಬ್ಬ ದೊಡ್ಡ ಉದ್ಯಾಮಿಗೆ ಮೀನುಗಳನ್ನು ಮಾರಲು ಹೋದ, ಆ ಉದ್ಯಾಮಿಯು ಕೇಳಿದ, ಏನಪ್ಪ ಈ ಮೀನುಗಳನ್ನು ಎಲ್ಲಿ ಹಿಡಿದೇ, ಇದರ ಗುಣಮಟ್ಟ ತುಂಬಾ ಚನ್ನಾಗಿದೆ? ಎಷ್ಟು ಸಮಯ ಬೇಕಾಯಿತು ಎವುಗಳನ್ನು ಹಿಡಿಯಲು? ಎಂದು ಕೇಳಿದ.

ಅದಕ್ಕೆ ಆ ಮೀನುಗಾರನು ಹೇಳಿದ, ಆ ಮೀನುಗಳನ್ನು ಸಾಗರದ ಹಾಳದಲ್ಲಿ ಹಿಡಿದು ತಂದಿದ್ದೇನೆ, ಆದ್ದರಿಂದಲೇ ಮೀನುಗಳ ಗುಣಮಟ್ಟ ತುಂಬಾ ಚನ್ನಾಗಿದೆ, ಅವುಗಳನ್ನೂ ಹಿಡಿಯಲು ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಹೇಳಿದ! ಆ ಉದ್ಯಾಮಿಯು ಕೇಳಿದ, ಎಷ್ಟು ಮೀನುಗಳನ್ನು ಹಿಡಿಯುತ್ತಿಯ ಒಂದು ದಿನಕ್ಕೆ? ಅದಕ್ಕೆ ಆ ಮೀನುಗಾರನು ಹೇಳಿದ, ಕೇವಲ ನನ್ನ ಸಂಸಾರವನ್ನು ನೆಡೆಸಲು ಬೇಕಾಗುವಷ್ಟು ನಾನು ಹಿಡಿಯುತ್ತೇನೆ. ಆಗ ಆ ಉದ್ಯಾಮಿ ಕೇಳಿದ, ಇನ್ನು ಉಳಿದ ಸಮಯದಲ್ಲಿ ಏನನ್ನು ಮಾಡುತ್ತಿಯ? ಅದಕ್ಕೆ ಮೀನುಗಾರನು ಹೇಳಿದ, ನಾನು ಮಲಗುವುದು ತುಂಬಾ ತಡವಾಗಿ ಮಲಗುತ್ತೇನೆ, ತಡವಾಗಿ ಹೇಳುತ್ತೇನೆ, ಜೀವನಕ್ಕೆ ಬೇಕಾಗುವಷ್ಟು ಮೀನುಗಳನ್ನು ಹಿಡಿಯುತ್ತೇನೆ, ನನ್ನ ಮುದ್ದಿನ ಮಕ್ಕಳೊಡನೆ ಆಟವಾಡುತ್ತೇನೆ, ನನ್ನ ಸ್ನೇಹಿತರೊಡನೆ ಸಂತೋಷದಿಂದ ಕಾಲ ಕಳೆಯುತ್ತೇನೆ, ನನ್ನ ಗ್ಹಿತಾರ್ನ್ನು ನುಡಿಸುತ್ತೇನೆ, ಕೆಲವು ಹಾಡುಗಳನ್ನೂ ಹಾಡುತ್ತೇನೆ ಎಂದ!

 ಅದಕ್ಕೆ ಆ ಉದ್ಯಾಮಿರು ಹೇಳಿದ! ನಾನು ಮ್.ಬಿ.ಎ ಯನ್ನೂ ಹರ್ವದ್ ಯುನಿವರ್ಸಿಟಿಯಲ್ಲಿ ಮುಗಿಸಿದ್ದೇನೆ, ನಾನು ನಿನಗೆ  ಒಂದು ಸಲಹೆ ಕೊಡುತ್ತೇನೆ, ನೀನು ಪ್ರತಿ ದಿನ ಹೆಚ್ಚು ಕಾಲ ಹೆಚ್ಚು ಹೆಚ್ಚು ಮೀನುಗಳನ್ನು ಹಿಡಿದು ಮಾರಾಟ ಮಾಡು ನೀನು ತುಂಬಾ ಹಣ ಸಂಪಾದಿಸಬಹುದು, ದೊಣಿಗಳನ್ನು ಕೊಂಡುಕೊಳ್ಳ ಬಹುದು! ಎಂದ.

ಮೀನುಗಾರನು ಕೇಳಿದ, "ಆದಾದಮೇಲೆ?"

ತುಂಬಾ ಹೆಚ್ಚು ಹಣಗಳಿಸಿ ದೊಡ್ಡ ಬೋಟ್ ಗಳನ್ನೂ ತೆಗೆದುಕೊಳ್ಳಬಹುದು, ಹೆಚ್ಚು ಹೆಚ್ಚು ಮೀನುಗನಳನ್ನು ಹಿಡಿದು ದೊಡ್ಡ ಶ್ರೀಮಂತನಾಗಬಹುದು, ಒಂದು ಸ್ವಂತ ಮಾರ್ಕೆಟ್ ನ್ನು ತೆಗೆಯ ಬಹುದು, ಹಲವಾರು ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಬಹುದು, ದೊಡ್ಡ ದೊಡ್ಡ ಮಾರ್ಕೆಟ್ ಗಳಲ್ಲಿ ತುಂಬಾ ದೊಡ್ಡ ಹೆಸರು ಹಣ ಗಳಿಸಬಹುದು, ಆಗ ನೀನು ಮತ್ತು ನಿನ್ನ ಸಂಸಾರ ನಗರದಲ್ಲಿ ಶ್ರೀಮಂತ ಜೀವನ ನಡೆಸಬಹುದು, ಎಂದ.


ಮೀನುಗಾರನು ಕೇಳಿದ, ಇದೆಲ್ಲ ಏಷ್ಟು ವರ್ಷಗಳು ಇಡಿಯಬಹುದು? ಆದಾದ ಮೇಲೆ ಇನ್ನೇನು?

ಆಗ  ಉದ್ಯಾಮಿಯು ನಗುತ್ತ! ಗೆಳೆಯ ನೀನು ಇಷ್ಟೆಲ್ಲಾ ಆದಮೇಲೆ ನೀನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇರ್ ಗಳನ್ನೂ ಕೊಂಡು ಕೊಳ್ಳಬಹುದು, ಮಾರಬಹುದು, ಮಿಲಿಯನ್ ಬಿಲಿಯನ್ ಗಟ್ಟಲೆ ಹಣ ಸಂಪಾದಿಸಬಹುದು, ಎಂದ!

ಮೀನುಗಾರನು ಕೇಳಿದ,"ಆದಾದ ಮೇಲೆ?"

ಇಷ್ಟಾದಮೇಲೆ ನೀನು ಸಾಗರದ ತೀರದಲ್ಲಿನ ಒಂದು ಹಳ್ಳಿಯಲ್ಲಿ ಒಂದು ಫಾರಂ ಹೌಸ್ ತೆಗೆದುಕೊಳ್ಳಬಹುದು, ತುಂಬಾ ತಡವಾಗಿ ಮಲಗಿ ಹೇಳಬಹುದು, ನಿನ್ನ ಮಕ್ಕಳ ಜೊತೆ ಆಟವಾಡಬಹುದು, ನಿನ್ನ ಹೆಂಡತಿಯ ಜೊತೆ ಸಂಜೆಯ ಸಮಯವನ್ನೂ ಸಾಗರದ, ಕಡಲ ತೀರದಲ್ಲಿ ಕಾಲ ಕಳೆಯಬಹುದು, ನಿನ್ನ ಆಪ್ತ ಸ್ನೇಹಿತರೊಡನೆ ಆಟ ಮಾತು, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂತೋಷವಾಗಿ ಕಾಲ ಕಳೆಯಬಬುದು! ಎಂದ.

ಸ್ನೇಹಿತರೆ ಈ ಕಥೆಯಿಂದ ನಾನು ಹೇಳಲು ಬಯಸಿದ್ದು ಎಷ್ಟೇ, ನಾವು ಒಂದು ಸಥ್ಯವನ್ನು ತಿಳಿದುಕೊಳ್ಳಬೇಕು, ನಾನು ಯಾವ ಕಡೆಗೆ ಜೀವನ ಸಾಗಿಸುತ್ತಿದ್ದೇವೆ,ಈಗಿರುವ ಸಂತೋಷದ ಸಮಯವನ್ನೂ ಬಿಟ್ಟು ಮುಪ್ಪಿನಲ್ಲಿ ಈಗಿರುವ ಸಂತೋಷವನ್ನು ಪಡಲು ಬಯಸುತ್ತೇವೆ, ಆದರೆ ನಮಗೆ ತಿಳಿಯುವುದಿಲ್ಲ, ಈಗಾಗಲೇ ನಾವು ಆ ಸಂತ್ಹೊಶಗಳನ್ನು ಅನುಭವಿಸುತ್ತಿದ್ದೇವೆ ಎಂಬುದನ್ನು. ಇದು ಎಲ್ಲರ ಜೀವನದ ಸತ್ಯವಾದ ಸಂಗತಿ!


******************************ದಿ ಎಂಡ್ ********************************

Thursday, November 4, 2010

ದೀಪಾವಳಿ!

ದೀಪದಿಂದ ದೀಪಹಚ್ಚೋ ದೀಪಾವಳಿ!
ಕತ್ತಲೆಯನ್ನೂ ಬಡಿದೋಡಿಸುವ ದೀಪಾವಳಿ
ಹೊಸ ಜೋಡಿಗೆ ಹೊಸ ಬೆಳಕಿನ ದೀಪಾವಳಿ
ಜ್ಞಾನದಿಂದ ಅಜ್ಞಾನವನ್ನು  ಹೊಡಿಸುವ ದೀಪಾವಳಿ
ಹೊಸಕನಸಿಗೆ ದಾರಿದೀಪವಾದ ದೀಪಾವಳಿ
ಮನಸು  ಮನಸುಗಳು ಬೆರೆಯುವ ದೀಪಾವಳಿ
ಬೆಳಕಿನ  ಹಬ್ಬವಿದು ದೀಪಾವಳಿ