Monday, January 31, 2011

ಅವಕಾಶಗಳು ನಿಮ್ಮ ಮನೆಯ ಬಾಗಿಲು ಬಡಿದಾಗ ??????


ನಿಮ್ಮ ಪ್ರಯತ್ನ ನಿಲ್ಲಿಸಬೇಡಿ..........!

ಹಲೋ ಗೆಳೆಯರೇ,

ನಿಮಗೆ ಇವರು ತಿಳಿದಿರಬಹುದು MR.Colonel Harland Sanders!

ಸಂಡಿರ್ಸ್ ಅವರು ತಮ್ಮ ನಿವೃತ್ತಿಯೊಂದಿದ್ದು ೬೫ ರ ವಯಸ್ಸಿನಲ್ಲಿ, ಅವರಿಗೆ ಪ್ರತಿ ತಿಂಗಳಿಗೆ $೧೦೬ ನಿವೃತ್ತಿ ವೇತನ ಅವರ ಮನೆಗೆ ಚಕ್ ಬಂದು ಸೇರುತ್ತಿತ್ತು, ಆದರೆ ಅವರಿಗೆ ಆ ಹಣ ಯಾವುದಕ್ಕೂ ಸಾಕಾಗುತ್ತಿರಲಿಲ್ಲ, ಅವರು ಒಂದು ಒಳ್ಳೆಯ ಚಿಕನ್ ಅಡುಗೆ ಮಾಡುತ್ತಿದ್ದರು, ಆ ಊಟ ಅವರಿಗೆ ತುಂಬಾ ಖುಷಿ ಕೊಡುತ್ತಿತ್ತು, ಅದನ್ನು ತುಂಬಾ ಇಷ್ಟಪಡುತಿದ್ದರು. ಅವರಿಗೆ ತುಂಬಾ ಯೋಚನೆಯಾಗಿತ್ತು ಅವರ ನಿವೃತ್ತಿ ವೇತನ ಆತನ ಜೀವನ ನಡೆಸಲು ಯಾವುದಕ್ಕೂ ಸಾಕಾಗುತ್ತಿರಲಿಲ್ಲ.

ಒಂದು ದಿನ ಅವರು ನಿರ್ಧರಿಸಿದರು, ಅವರು ಮಾಡುವ ಚಿಕನ್ ಅಡುಗೆಯನ್ನು ಕೆಲವು ಹೋಟೆಲ್ ಗಳಿಗೆ ಮಾರಾಟಮಾಡುವುದು ಮತ್ತು ಹಣ ಸಂಪಾದಿಸುವುದಾಗಿ. ಹಾಗೆಯೇ ಅವರು ಒಂದು ದಿನ ಒಂದಿಷ್ಟು ಚಿಕನ್ ತಯಾರುಮಾಡಿ ಒಂದು ಹೋಟೆಲ್ ಗೆ ತೆಗೆದುಕೊಂಡು ಹೋದರು, ಆದರೆ ಅಲ್ಲಿ ಅವರಿಗೆ ನಿರಾಸೆಯಾಯಿತು, ಆ ಹೋಟೆಲ್ ಮಾಲೀಕ ಆ ಚಿಕನ್ ಅನ್ನು ನಿರಾಕರಿಸಿದ.

ಆದರೆ ಸಂಡಿರ್ಸ್ ಅವರು ಅವರ ಛಲವನ್ನೂ ಬಿಡಲಿಲ್ಲ.

ಎರಡನೇ ಬಾರಿ ಯತಾಪ್ರಕಾರ ಪ್ರಯತ್ನಿಸಿದರೂ.....


ಮೂರನೇ ಬಾರಿ .........


ನಾಲ್ಕನೇ ಬಾರಿ.........


ಆದರೆ ಅವರಿಗೆ ಆಗಿದ್ದು ನಿರಾಶೆ, ಅವರು ೧೦೦೮ ಬಾರಿ ನಿರಾಶೆ ಅನುಭವಿಸಿದರು, ಆದರೆ ಅವರು ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ , ಅವರು ಎಲ್ಲ ಹೋಟೆಲ್ ಮಾಲಿಕರ ಬಳಿ ಹೋಗುವುದು ಮತ್ತು ಚಿಕನ್ ತೋರಿಸುವುದು ಮಾಡುತ್ತಿದ್ದರು, ಅಮೇರಿಕಾದ ಎಲ್ಲ ನಗರಗಳನ್ನು ಸುತ್ತುತ್ತ ಹೋಟೆಲ್ ಮಾಲಿಕರಿಗೆ ತಮ್ಮ ಚಿಕನ್ ಪರಿಚಯ ಮಾಡಿಸುವುದು ಬಿಡಲಿಲ್ಲ ಕೆಲವುಬಾರಿ ಅವರು ಹೋಟೆಲ್ ನಲ್ಲಿ ಮಲಗಲು ಹಣ ಇಲ್ಲದೆ ತಮ್ಮ ಕಾರಿನಲ್ಲೇ ಮಲಗುತ್ತಿದ್ದರು. 

ಅದೊಂದು ದಿನ ಅವರ ಪಾಲಿಗೆ ಸಣ್ಣ ಜಯ ಸಿಕ್ಕಿತು, ಅದು ೧೦೦೯ನೇ ಬಾರಿಯ ಪ್ರಯತ್ನವಾಗಿತ್ತು, ಒಂದು ಹೋಟೆಲ್ ನ ಮಾಲೀಕ ಅವರ ಚಿಕನ್ ನ್ನು ಕರೀದಿಮಾಡಲು ಮುಂದಾದರು, ಆ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು.

ಇದಾದ ೨ ವರ್ಷಗಳ ಪ್ರತಿನಿತ್ಯದ ಮಾರಾಟದ ನಂತರ ಅವರಿಗೆ ೫ ಹೋಟೆಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡರು. ಸಂಡಿರ್ಸ್ ಅವರು ತಮ್ಮ ಪ್ರಯತ್ನದಲ್ಲಿ ಇನ್ನೂ ಹೆಚ್ಚು ಮುತುವರ್ಜಿವಯಿಸಿ ಉತ್ತಮ ಚಿಕನ್ ಗಳನ್ನು ತಯಾರು ಮಾಡಲು ಶುರುಮಾಡಿದರು.ಹಾಗೆಯೇ ಅವರು ಸ್ವಲ್ಪ ವರ್ಷಗಳಲ್ಲೇ ೬೦೦ ಹೋಟೆಲ್ ಗಳಲ್ಲಿ ದೇಶದಾದ್ಯಂತ ಒಪ್ಪಂದ ಮಾಡಿಕೊಂಡರು, ಅವರ ಚಿಕನ್ ಹೆಸರು ನಿಮಗೆ ಚನ್ನಾಗಿಯೇ ಗೊತ್ತಿದೆ ಅದರ ಹೆಸರು "ಕೆನ್ಚುಕಿ ಫ್ರೈಡ ಚಿಕನ್" ಸ್ವಲ್ಪ ವರ್ಷಗಳಲ್ಲೇ ಅವರು ಕೊಟ್ಯಾದಿಪತಿ ಆಗಿಬಿಟ್ಟರು.

ಗೆಳೆಯರೇ ನೀವು ಈ ಕಥೆಯಿಂದ ಒಂದು ತಿಳಿದುಕೊಳ್ಳಬಹುದು ಅದು "ಇನ್ನೂ ಸಮಯ ಮುಗಿದಿಲ್ಲ ಜಿವನವನ್ನು ಬಿಟ್ಟುಕೊಡುವುದು ಬೇಡ!!"

ಸಂಡಿರ್ಸ್ ಅವರು ಈ ಮುಂಚೆ ಅಲವಾರು ವ್ಯಾಪಾರ ಮಾಡಿದ್ದರು ಆದರೆ ಅವರಿಗೆ ಗೆಲುವು ಸಿಕ್ಕಿರಲಿಲ್ಲ  ಆದರೆ ಅವರ ೬೫ ನೇ ವಯಸ್ಸಿನಲ್ಲಿ ಈ ಚಿಕನ್ ಮಾರಾಟದ ಯೋಚನೆ ತುಂಬಾ ಯೆಶಸ್ಸು ಸಿಕ್ಕಿತು. ಅವರಿಗೆ ಒಂದು ತಿಳಿದಿತ್ತು ಪ್ರಯತ್ನ ಮಾಡುತ್ತಲೇ ಇದ್ದರೆ ಒಂದಲ್ಲ ಒಂದು ಬಾರಿ ನಾನು ಯೆಶಸ್ಸು ಪಡೆಯುತ್ತೇನೆ ಎಂಬುದು, ಆದ್ದರಿಂದಲೇ ಅವರಿಗೆ ಆ ವಯಸ್ಸಿನಲ್ಲಿ ಅದ್ವಿತಿಯಾ ಜಯ ಸಿಕ್ಕಿದ್ದು!

ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ, "ಕೇಳಿರಿ! ಬೇಕಾದ್ದನ್ನು ಪಡೆಯಿರಿ, ಹುಡುಕಿರಿ! ನಿಮಗೆ ಬೇಕಾಗಿರುವುದನ್ನು ನೀವು  ನೋಡಬಹುದು, ಡೋರ್ ನ್ನು ತಟ್ಟಿ! ಡೋರ್ ತೆರೆಯಬಹುದು", ಆದರೆ ಸುಮ್ಮನೆ ಒಂದು ಬಾರಿ ಕೇಳಿದರೆ ಸಾಕಾಗುವುದಿಲ್ಲ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿರಬೇಕು, ಸುಮ್ಮನೆ ಹುಡುಕಬೇಡಿ ಸಿಗುವವರೆಗೂ ಹುಡುಕಿ, ಸುಮ್ಮನೆ ಡೋರ್ ತಟ್ಟಬಾರದು ಡೋರ್ ತೆರೆಯುವವರೆಗೂ ಡೋರ್ ತಟ್ಟಿರಿ, ಇನ್ನೂ ಸಮಯ ಮುಗಿದಿಲ್ಲ ನಿಮ್ಮ ಪ್ರಯತ್ನ ಮುಂದುವರಿಯುತ್ತಲೇ ಇರಲಿ, ಎಂದೂ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ, ಒಂದಲ್ಲ ಒಂದು ದಿನ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.


***************************ದಿ ಎಂಡ್ ***************************

ಮಾನವಿಯಥೆ ಎಂದೂ ಕೈಬಿದುವುದಿಲ್ಲ.............

ಹಲೋ ಗೆಳೆಯರೇ,

ಒಂದು ದಿನ ಒಬ್ಬ ಬಡ ಹುಡುಗ ತನ್ನ ಓದಿನ ಸಲುವಾಗಿ ಶಾಲೆಗೆ ಹಣಪಾವತಿಸಬೇಕಾಗಿತ್ತು, ಆ ಬಾಲಕನು ಕೆಲಸಮಾಡುತ್ತ ಹಣ ಸಂಪಾದಿಸುತ್ತಿದ್ದ ಹಾಗೆ ಶಾಲೆಗೇ ಹಣ ಪಾವತಿಮಾಡಿ ಕಷ್ಟಪಟ್ಟು ಓದುತ್ತಿದ್ದ. ಒಂದು ದಿನ ಆ ಬಾಲಕ ಕೆಲವು ದಿನ, ದಿನಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುತ್ತಾ ಮನೆ ಮನೆಗೂ ಹೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸ್ವಲ್ಪ ಹಣವನ್ನು ಸಂಪಾದಿಸಿದ, ಆ ಹಣ ಶಾಲೆಗೇ ಪಾವತಿ ಮಾಡಲು ಸ್ವಲ್ಪ ಕಡಿಮೆ ಇತ್ತು, ಆ ದಿನದ ವ್ಯಾಪಾರ ಮುಗಿಯಿತು ಆದರೆ ಆತನಿಗೆ ತುಂಬಾ ಹೊಟ್ಟೆ ಹಸಿದಿತ್ತು ಆದರೆ ಆತನು ಊಟ ಮಾಡುವಷ್ಟು ಹಣ ಆತನ ಬಳಿ ಇರಲಿಲ್ಲ, ರಾತ್ರಿಬೇರೆ ಆಗುತ್ತಿತ್ತು, ಏನು ಮಾಡುವುದು ಎಂಬುದು ತಿಳಿಯದೆ ಒಂದು ಮನೆಯ ಬಾಗಿಲನ್ನು ತಟ್ಟಿದನು, ಮನಸ್ಸಿನಲ್ಲೇ ದೇವರನ್ನು ನೆನೆಯುತ್ತ, ಆ ಮನೆಯಿಂದ ಒಂದು ವಯಸ್ಸಾದ ತಾಯಿ ಅಥವಾ ತಂದೆ ಬಂದು ಕದವನ್ನುತೆಗೆದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತ ಕದವನ್ನು ತಟ್ಟಿದ.

ಆಗ ಆ ಮನೆಯಿಂದ ಒಂದು ಸುಂದರ ಹುಡುಗಿ ಬಂದು ಬಾಗಿಲನ್ನು ತೆಗೆದಳು, ಆಕೆಯನ್ನು ನೋಡಿ ಆ ಹುಡುಗ, ಊಟ ಕೇಳಲು  ಆಗದೆ ಅನುಮಾನದಿಂದ, ಆಕೆಯನ್ನು ಒಂದು ಲೋಟ ನೀರನ್ನು ಕೇಳಿದ, ಆಗ ಆಕೆಯು ಆತನನ್ನು ಸರಿಯಾಗಿ ಗಮನಿಸಿ ಆತನು ತುಂಬಾ ಹಸಿವಿನಿಂದ ಇರುವುದನ್ನು ನೋಡಿ, ಒಂದು ದೊಡ್ಡ ಲೋಟದಲ್ಲಿ ಹಸುವಿನ ಹಾಲನ್ನು ತುಂಬಿ ತಂದು ಕೊಟ್ಟಳು. ಆಗ ಆ ಬಾಲಕ ಆಶ್ಚರ್ಯದಿಂದ ಅದನ್ನು ಸ್ವಿಕರಿಸಿದನು, ಆನಂತರ ಆ ಬಾಲಕ ದನ್ಯವಾದ ಏಳಿ ಸ್ವಲ್ಪ ಹಣ ಕೊಡಲು ಮುಂದಾದನು, ಆದರೆ ಆ ಬಾಲಕಿ ಆ ಹಣವನ್ನು ನಿರಾಕರಿಸಿದಳು, ಹಾಗೆ ಆಕೆ ಹೇಳಿದಳು ನನ್ನ ತಾಯಿ ಹೇಳಿದ್ದರೆ ಯಾರಬಳಿಯಲ್ಲೂ ಹಣ ಪಡಿಯಬಾರದು ಸಹಾಯ ಮಾಡಿದ್ದಕ್ಕೆ ಎಂದಳು, ಆಗ ಆ ಬಾಲಕ ತುಂಬಾ ಸಂತೋಷನಿದಿಂದ ಮನೆಗೆ ಹೋದ.


ಆ ಬಾಲಕನ ಹೆಸರು ಹಾರ್ವರ್ಡ್ ಕೆಲ್ಲಿ.

ಕೆಲವು ವರ್ಷಗಳ ನಂತರ ಆ ಹುಡುಗಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಳು ಆಗ ಆಕೆಯನ್ನು ಒಂದು ಆಸ್ಪತ್ರೆಗೆ ಸೇರಿದ್ದಳು, ಆ ಕಾಯಿಲೆಯು ತುಂಬಾ ದೊಡ್ದದಾಗಿದ್ದರಿಂದ ಒಬ್ಬ ಹಿರಿಯ ಆರೋಗ್ಯ ತಜ್ಞರನ್ನು ಕರೆಸಿ, ಆಕೆಯ ಕಾಯಿಲೆಯನ್ನು ಅದ್ಯಯನ ಮಾಡಲು ನಿರ್ದರಿಸಿದರು, ಹಾಗೆಯೇ ಒಬ್ಬ ಹಿರಿಯ ವೈಧ್ಯಕಿಯ ಬಂದರು ಅವರು ಬೇರೆಯಾರು ಆಗಿರಲಿಲ್ಲ, ಅವರು ಹಾರ್ವರ್ಡ್ ಕೆಲ್ಲಿ.

ಡಾ.ಕೆಲ್ಲಿ ಯವರು ಆಕೆಯನ್ನು ನೋಡಿ ಆಕೆಯನ್ನು ಗುರುತಿಸಿದರು, ಆಕೆಯ ಕಾಯಿಲೆಯ ಬಗ್ಗೆ ವಿಶೇಷ ಕಾಳಜಿ ಹೊಯಿಸಿ, ಆಕೆಯನ್ನು ಕಾಯಿಲೆಯಿಂದ ಹುಷಾರ್ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಕೊನೆಗೂ ಡಾ.ಕೆಲ್ಲಿ ಗೆದ್ದೆಬಿಟ್ಟರು ಆಗೆಯೇ ಸ್ವಲ್ಪ ದಿನಗಳಲ್ಲಿ ಆಕೆಯ ಕಾಯಿಲೆ ಹುಷಾರ ಹಾಗಿಬಿಟ್ಟಿತು, ಆಕೆಗೆ ಹೆಚ್ಚರ ಬಂದಾಗ ಆ ಆಸ್ಪತ್ತ್ರೆಯನ್ನೂ ನೋಡಿ ತುಂಬಾ ಭಯಬೀತಳಾಗಿ, ಆಕೆಯ ಕಾಯಿಲೆ ಹುಷಾರ್ ಆಗಿ, ಆ ಆಸ್ಪತ್ರೆಯ ಬಿಲ್ ಪಾವತಿ ಮಾಡಲು ತನ್ನ ಜೀವಮಾನವನ್ನೇ ಮುಡುಪಾಗಿ ಇಡಬೇಕಾಗುತ್ತದ್ದೆ ಎಂದು ಯೋಚಿಸುತ್ತ ದುಃಖಿಸುಟ್ಟಿದ್ದಳು.

ಡಾ.ಕೆಲ್ಲಿ ಯವರು ಆ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ ಆಕೆಯ ಬಿಲ್ ಗಳನ್ನು ಅವರಿಗೆ ಕಳಿಸಲು ಹೇಳಿದರು, ಹಾಗೆಯೇ ಡಾ.ಕೆಲ್ಲಿ ಆ ಬಿಲ್ ಪಾವತಿಸಿದರು, ನಂತರ ಆಕೆಯ ಬಿಲ್ ಗಳನ್ನು ಆಕೆಗೆ ಕಳುಯಿಸಿಕೊಟ್ಟರು, ಆ ಬಿಲ್ ನ ಕೆಳಕೆ ಡಾ. ಹಾರ್ವರ್ಡ್ ಕೆಲ್ಲಿ ಯವರು ಬರೆದಿದ್ದರು " ಹಣ ಪಾವತಿಸಿದೆ ಒಂದು ಲೋಟದ ಹಾಲಿನಿಂದ" ಎಂದು ಬರೆದಿದ್ದರು.


ಆ  ಬಿಲ್ ನ್ನು ನೋಡಿ, ಡಾ.ಹಾರ್ವರ್ಡ ಕೆಲ್ಲಿ ಯವರು ಬರೆದಿರುವುದನ್ನು ನೋಡಿ ಆಕೆಯ ಕಣ್ಣುಗಳು ಕಣ್ಣಿರಿನಿಂದ ತುಂಬಿಕೊಂಡು ದೇವರನ್ನು ಅಭಿನಂದಿಸಿದಳು

ಗೆಳೆಯರೇ ಈ ಮೂಲಕ ನಿಮಗೆ ತಿಳಿಸುವುದೆನಿಂದರೆ, ನೀವು ಮಾಡುವ ಸಹಾಯಕ್ಕ ಯಾವ ನಿರೀಕ್ಷೆ ಇಲ್ಲದೆ ಸಹಾಯ ಮಾಡಿ, ಆ ಸಹಾಯ ನಿಮ್ಮನ್ನು ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮನ್ನು ಕೈ ಬಿಡುವುದಿಲ್ಲ.

*****************************ದಿ ಎಂಡ್ *******************************