Friday, October 30, 2015

ಜೈ ಕನ್ನಡ ರಾಜ್ಯೋತ್ಸವ.... !





ಭಾಷ್ಗುಳೊಳಗೆ ಹಾಡೋಕೊಂದೇ ನಮ್ಮ ಕನ್ನಡದ್ ಬಾಷೆ 
ಇರದ್ಯಾವ್ ಜಾಗ್ವಾದ್ರೆನು ಹೃದ್ಯುಕ್ ಮುಟ್ಟೋದ್ ನಮ್ಮ ಕನ್ನಡದ್ ಬಾಷೆ  
ಕ್ಯಾಮೆಗೆಯಾವ್ ಭಾಷ್ಯದ್ರೆನು, ಕನುಸ್ಗುಳ್ ಬಿಳೋದ್ ನಮ್ಮ ಕನ್ನಡದ್ ಬಾಷೆಲಿ
ಕನ್ನಡ ಕಲ್ತ್ ಮ್ಯಾಕೆ, ಕಲ್ತ್ ಕೊಂಡ್ ಬೆಳೆದ್ ಮ್ಯಾಕೆ ಕಲುಸ್ ಬಾರ್ ದ್ಯಾಕೆ ನಮ್ಮ ಕನ್ನಡದ್ ಬಾಷೆ 
ಮರ್ ಗುಳಿಂದ್ ಮರ್ ಗುಳಿಗ್ ಹಬ್ಬೋ ಬಳ್ಳಿಯಂಗೆ ಹಬ್ಲಿ ನಮ್ಮ ಕನ್ನಡದ್ ಬಾಷೆ 
ಸ್ವಲ್ಪವಾದ್ರೂ ಋಣವ ತೀರ್ಸೊಣ್ ಬನ್ನಿ ಉದ್ದಾರಾಗೊಕ್ ಬಳಸಿದ್ ನಮ್ಮ ಕನ್ನಡದ್ ಬಾಷೆ

ಜೈ ಕನ್ನಡ ..... ! ಜೈ ಕರ್ನಾಟಕ ...... !

Friday, February 13, 2015

ಪ್ರಯತ್ನ ಎಂದಿಗೂ ನಿಲ್ಲದಿರಲಿ ....... !





ಒಂದು ದಿನ ತಂದೆ ಮತ್ತು ಮಗಳು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ತುಂಬಾ ಮಳೆ, ಗಾಳಿ, ಮಿಂಚು ಮತ್ತು ಗುಡುಗು ಬರುತ್ತಿತ್ತು. ಮಗಳು ತಂದೆಯನ್ನು ಕೇಳಿದಳು, ಅಪ್ಪ ತುಂಬಾ ಮಳೆ ಗಾಳಿ ಇದೆ, ಕಾರ್ ನ್ನು ಮುಂದೆ ಹೊಡಿಸಲು ಖಷ್ಟ ಆಗುತ್ತಿದೆ, ದಾರಿ ಸರಿಯಾಗಿ ಕಾಣಿಸುತ್ತಿಲ್ಲ ಅಂದಳು. ಆದರೆ ಅಪ್ಪ ಕಾರ್ ನ್ನು ನಿಲ್ಲಿಸಬೇಡ, ಮುಂದೆ ಸಾಗು ಅಂದ, ಸ್ವಲ್ಪ ದೂರದ ನಂತರ ಕೆಲವು  ವಾಹನಗಳು  ರಸ್ತೆ ಬದಿಯಲ್ಲಿ ನಿಂತಿದ್ದವು ಅವುಗಳನ್ನು ನೋಡಿದ ಮಗಳು ಹೇಳಿದಳು, ಅಪ್ಪ ತುಂಬಾ ಖಷ್ಟ ಆಗುತ್ತಿದೆ, ತುಂಬಾ ವಾಹನಗಳು ಮುಂದೆ ತೆರಳದೆ ನಿಂತಿವೆ ಅಂದಳು.

ತಂದೆ ಯಾವುದೇ ಕಾರಣಕ್ಕೂ ಕಾರ್ ನ್ನು ನಿಲ್ಲಿಸಬೇಡ, ಮುಂದೆ ಸಾಗುತ್ತಲೇ ಇರು ಅಂದ. ಸ್ವಲ್ಪ ದೂರ ತೆರಳಿದ ನಂತರ, ಮಳೆ ಗಾಳಿ ತುಂಬಾ ಹೆಚ್ಚಾಗುತ್ತಿತ್ತು, ದೊಡ್ಡ ದೊಡ್ಡ ವಾಹನಗಳು ಸಹ ಮುಂದೆ ಸಾಗಲು ಭಯಪಟ್ಟು ನಿಲ್ಲಿಸಿದ್ದರು. ಆದರೆ, ಆಕೆಯ ತಂದೆ ಯಾವುದೇ ಕಾರಣಕ್ಕೂ ಕಾರ್ ನ್ನು ನಿಲ್ಲಿಸದೆ ಮುಂದೆ ಸಾಗು ಅಂದ.

ಸ್ವಲ್ಪ ದೂರ ಸಾಗಿದ ನಂತರ, ಮಳೆ, ಮೋಡ, ಗಾಳಿ ಕಡಿಮೆಯಾಗಿ, ಸೂರ್ಯನ ಬೆಳಗು ಮತ್ತು ಸುಂದರವಾದ ವಾತಾವರಣ ಕಂಡಿತು. ಆಗ ತಂದೆ ಕಾರ್ ನ್ನು ನಿಲ್ಲಿಸು ಎಂದು ಮಗಳಿಗೆ ಹೇಳಿದನು.

ಆಗ ಮಗಳು ಕೇಳಿದಳು, ಅಪ್ಪ ತುಂಬ ಮಳೆ ಗಾಳಿ ಬರುವಾಗ ಕಾರ್ ನ್ನು ನಿಲ್ಲುಸುವೆ ಅಂದರೆ, ನೀವು ಬೇಡ ಅದೇ, ಆದರೆ ಈಗ ಯಾವುದೇ ಭಯವಿಲ್ಲ, ನಾವು ಯಾಕೆ ಕಾರ್ ನ್ನು ನಿಲ್ಲಿಸಬೇಕು ಎಂದು ಕೇಳಿದಳು. ಆಗ ತಂದೆ ಹೇಳಿದ, ಖಷ್ಟದ ಕಾಲದಲ್ಲಿ ನಾವು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು, ಪ್ರಯತ್ನದ ಮೇಲೆ ಪ್ರಯತ್ನ ಮಾಡುತ್ತಲೇ ಇರಬೇಕು. ಸುಖ ಬಂದಾಗ ಪ್ರಯತ್ನ ನಿಲ್ಲಿಸಿದರು ಯಾವುದೇ ಅಪಯವಿರುವುದಿಲ್ಲ ಎಂದ.

ಈ  ಕಥೆ ಬರೆಯುವಾಗ ನಾನೇ ಬರೆದ ಒಂದು ಕವನ ನೆನಪಾಗುತ್ತೆ ನನಗೆ.

ಸಾದನೆಯ ಹಾದಿಯಲ್ಲಿ ಕಲ್ಲು ಮುಳ್ಳುಗಳಿರಲಿ
ನೋವು ನಲಿವು ಗಳಿರಲಿ,  ಸೋಲು ಗೆಲುವುಗಳಿರಲಿ,
ಸಾದಿಸುವ ಛಲವೂಯನ್ನ ಬಿಡದಿರಲಿ. 

Thursday, January 22, 2015

ದೇವರಿಗೆ ಒಂದು ಥ್ಯಾಂಕ್ಸ್ ಹೇಳೋದರಲ್ಲಿ ತಪ್ಪಿಲ್ಲಾ ಅಲ್ವಾ ?




ಸ್ನೇಹಿತರೇ,

ಕೆಲವರು ಹೇಳುತ್ತಾರೆ  ದೇವರು ಇದಾನೆ ಅಂತಾ, ಕೆಲವರು ಹೇಳುತ್ತಾರೆ  ದೇವರು ಎಲ್ಲಾ ಇಲ್ಲಾ  ಅಂತಾ. ಇನ್ನಾ  ಕೆಲವರು  ಹೇಳುತ್ತಾರೆ ದೇವರು ಒಬ್ಬಾ, ಇನ್ನಾ  ಕೆಲವರು ಇದರಲ್ಲೆಲ್ಲ ನಂಬಿಕೆನೇ ಇಟ್ಟಿರೋಲ್ಲ. ಅದೇನೇ ಇರಲಿ, ಇವತ್ತು ದೇವರ ಪರವಾಗಿ ಮಾತಾಡ್ತೀನಿ. 

ಕೆಲವು ಸಾರಿ ನಮಗೆ ಯಾರಾದ್ರು ಸಹಾಯ ಮಾಡಿದ್ರೆ, ನಾವು ಥ್ಯಾಂಕ್ಸ್ ಅಂತ ಹೇಳ್ತಿವಿ, ಕೆಲವು ಬಾರಿ ಹೇಳೋದೇ ಇಲ್ಲಾ.  ಹಾಗೆಯೇ ಕೆಲವು  ಸಮಯ ಯಾರಾದ್ರು  ಸಹಾಯ ಮಾಡಿದ್ರೆ, ದೇವರಾಗಿ  ಬಂದು ಸಹಾಯ ಮಾಡಿದ್ರು  ಅಂಥ ಹೇಳ್ತಿವಿ.  ಇಲ್ಲಿ ಒಂದು ಉದಾಹರಣೆ ಕೊಡೋಕೆ ಇಷ್ಟಪಡುತ್ತೇನೆ. 

ಆರು ಅಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಮೇಸ್ತ್ರಿ ಆರನೇ ಅಂತಸ್ತಿನಲ್ಲಿ ನಿಂತಿದ್ದ, ಕಟ್ಟಡ ಕಾರ್ಮಿಕರು ನೆಲಮಾಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕಟ್ಟಡದಲ್ಲಿ ತುಂಬಾ ಶಬ್ದ ಇತ್ತು. ಮೇಸ್ತ್ರಿ, ಕೆಲ  ಕಾರ್ಮಿಕರಿಗೆ ಏನೋ ಹೇಳಲು ಇಚ್ಚಿಸುತ್ತಾನೆ, ಆದರೆ ಕಾರ್ಮಿಕರಿಗೆ ಅವನ ಕೂಗು ಕೇಳುತ್ತಿರಲಿಲ್ಲ. ಮೇಸ್ತ್ರಿ ಒಂದು ಉಪಾಯ ಮಾಡುತ್ತಾನೆ, ೧೦ ರೂಪಾಯಿ ನೋಟು ಮೇಲಿನಿಂದ ಹಾಕಿದರೆ, ಕೆಲಸಗಾರರು ನನ್ನಕಡೆ ನೋಡಬಹುದು ಎಂದು ೧೦ ರೂಪಾಯಿ ನೋಟನ್ನ ಕೆಳಗೆ ಹಾಕುತ್ತಾನೆ, ಕೆಳಗಡೆ ಕೆಲಸ ಮಾಡುತ್ತಿದ್ದ ಕೆಲಸಗಾರ ಆ ೧೦ ರೂಪಾಯಿ ನೋಡಿ, ತೆಗೆದು ಜೋಬಿನಲ್ಲಿ ಇಟ್ಟುಕೊಳ್ಳುತ್ತಾನೆ ಆದರೆ ಆ ಕೆಲಸಗಾರ ಮೇಸ್ತ್ರಿಯಾ ಕಡೆಗೆ ನೋಡೋದಿಲ್ಲ, ನಂತರ ಆತನ ಕೆಲಸವನ್ನ ಮುಂದುವರಿಸುತ್ತಾನೆ. ಮತ್ತೆ  ಆ ಮೇಸ್ತ್ರಿ ೧೦೦ ರೂಪಾಯಿ ನೋಟನ್ನ ಕೆಳಗೆ ಬಿಡುತ್ತಾನೆ, ಆಗಲು ಆ ಕೆಲಸಗಾರ ಆ ನೋಟನ್ನ ತೆಗೆದು ಜೋಬಿನಲ್ಲಿಳಿಸುತ್ತಾನೆ. ಮತ್ತೆ ಆ ಮೇಸ್ತ್ರಿ ೫೦೦ ರೂಪಾಯಿ ಕೆಳಗೆ ಹಾಕುತ್ತಾನೆ, ಮತ್ತೆ ಆ  ಕೆಲಸಗಾರ ಆ ನೋಟನ್ನು ಜೆಬಿಗಿಲಿಸುತ್ತಾನೆ ಆದರೆ ಆ ನೋಟು ಎಲ್ಲಿಂದ ಬರುತ್ತಿರಬಹುದು ಎಂದು ನೋಡಲೇ ಇಲ್ಲಾ. ಕೊನೆಗೆ ಆ ಮೇಸ್ತ್ರಿ ಒಂದು ಸಣ್ಣ ಕಲ್ಲು ತೆಗೆದು ಆ ಕಾರ್ಮಿಕನಿಗೆ ಹೊಡೆಯುತ್ತಾನೆ, ಆಗ ಆ ಕಾರ್ಮಿಕ ಮೇಸ್ತ್ರಿಯಕಡೆ ನೋಡುತ್ತಾನೆ.

ಈ ಕಥೆಯಿಂದ ನಾನು ಹೇಳಬಯಸುವುದೇನೆಂದರೆ, ಕೆಲವು ಸಮಯ ಆ ದೇವರು ಮೇಲಿಂದ ನಮ್ಮನ್ನು ಅವನ ಕಡೆಗೆ ನೋಡೋಹಾಗೆ ಮಾಡಲು ಸಣ್ಣ ಸಣ್ಣ ಸಹಾಯ ಮಾಡಿ ಪ್ರಯತ್ನಿಸುತ್ತಾನೆ. ಆದರೆ ನಾನು ತುಂಬಾ ಬ್ಯುಸಿ, ನಾವು ಅವನೆಡೆಗೆ ನೋಡೋದೇ ಇಲ್ಲಾ, ಆದನ್ನೆಲ್ಲಾ ನಾವು ಅದೃಷ್ಟ ಅನಕೊಥಿವಿ. ಆಗ ಆ ದೇವರು ನಮಗೆ ಖಷ್ಟ ಅನ್ನೋ ಕಲ್ಲಾನ್ನಾ ತಲೆಮೇಲೆ ಹೊಡೆದಗಾ ಮಾತ್ರ ನಾವು ಅವನ ಕಡೆ ನೋಡ್ತಿವಿ, ಅವನ ಬಳಿ  ಹೋಗ್ತಿವಿ. 

ಅದುಕ್ಕೆ ನಾನು ಹೇಳೋದು ಏನಪ್ಪಾ ಅಂದ್ರೆ, ಯಾವಾಗ ನಿಮಿಗೆ ಒಂದುoದು ಗೆಲುವಿಗು, ಸಣ್ಣ ಸಣ್ಣ ಗೆಲುವಿಗೂ ನಾವು ಆ ದೇವರ ಕೃಪೆ ಅನ್ನೋದನ್ನ ನಾವು ಮರೆಯಬಾರದು. ಒಂದು ನಮಸ್ಕಾರ ಹಾಕೋದನ್ನ ಮರಿಯಬರದು........... :-)

ಖಷ್ಟ ಬಂದಾಗ ಮಾತ್ರ ಅಲ್ಲಾ....ಸುಖಃ  ಬಂದಾಗಲು ವೆಂಕಟರಮಣ


*********************************************************************************

Monday, December 23, 2013

ಜಿ ಎಸ್ ಎಸ್ ರವರಿಗೆ ನಮ್ಮ ಎದೆತುoಬಿದ ನಮನ.... !








ಗೆಳೆಯರೇ,

ಈ ದಿನ ಕನ್ನಡ ನಾಡಿಗೆ ಅತ್ಯಂತ ನಷ್ಟಕರ ದಿನವೆಂದು  ನಾನು ಹೇಳಲು ಬಯಸುತ್ತೆನೆ. ಏಕೆಂದರೆ, G.S.S ರವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.

ನಿಮಗೆ ಗೊತ್ತಿದಿಯೋ ಇಲ್ಲವೋ! ನಾನು ಒಬ್ಬ G.S.S. ಅಬಿಮಾನಿಯಾಗಿ ಹೇಳುತ್ತಿಲ್ಲ. ನಾನು G.S.S ರವರು ಬರೆದ ಹಾಡುಗಳನ್ನು ಕೇಳುತ್ತಾ ಎಷ್ಟೋ ಸುಖ ದುಃಖ ಗಳನ್ನೂ ತುಂಬಾ ಸರಾಗವಾಗಿ ನಿಬಾಯಿಸಿದೇನೆ. ಒಂದೊಂದು ಬಾರಿ ನನಗು ಅನ್ನಿಸುತ್ತಿತ್ತು, ನಾನು ಯಾಕೆ G.S.S ತರಹ ಯಾಕೆ ಆಗಬಾರದಿತ್ತು? ಅಂಥಾ ಅನ್ನಿಸುತ್ತಿತ್ತು.... !

ಈ ಕನ್ನಡ ಗೆಳೆಯರು ಬ್ಲಾಗ್ ಕ್ರಿಯೇಟ್ ಮಾಡಲು G.S.S ರವರು ನನ್ನಮೇಲೆ  ತುಂಬಾ ಪ್ರಭಾವ ಬೀರಿದ್ದರು.

ಈ ದಿನ ನನಗೆ ಮತ್ತು ನನ್ನ ಬ್ಲಾಗ್ ಗೆ ತುಂಬಾ ದುಃಖ ತಂದಿದೆ.

ಆ ದೇವರು G.S.S ರವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ನಾನು ಈ ಬ್ಲಾಗ್ ಮೂಲಕ ಕೇಳಿಕೊಳ್ಳುತ್ತೇನೆ.

ಈ ಕನ್ನಡ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ನಾನು ತುಂಬು ಹೃದಯದಿಂದ ಆಶಿಸುತ್ತೇನೆ.




*****************************The End********************************************

Sunday, July 21, 2013

ಸಂತೋಷವಿಲ್ಲದ ಮಹಿಳೆ..... !





ಒಂದು ದಿನ ಒಬ್ಬ ಹಿರಿಯರೊಬ್ಬರು, ಒಂದು ಸಂತೋಷವೇ ಇಲ್ಲವೆಂದು ಜೀವನ ನಡೆಸುತ್ತಿದ್ದ ಹುಡುಗಿಯನ್ನು ಭೇಟಿಯಾದ. 

ಆಕೆ ನೋಡಲು ತುಂಬ ಕಿನ್ನಥೆಯಿಂದಾ ಬಳಲುತ್ತಿರುವ ಹಾಗೆ ಬಾಸವಾಯಿತು. ಆಗ ಆ ಹಿರಿಯಾ ಆಕೆಗೆ ಒಂದು ಕೆಲಸ ಮಾಡಲು ಹೇಳಿದ, ಒಂದು ಗಾಜಿನ ಲೋಟದಲ್ಲಿ ನಿರು ತುಂಬಿಸಿ, ಒಂದು ಹಿಡಿ ಉಪ್ಪು ಬೆರಸುವಂತೆ ಹೇಳಿದ, ನಂತರ ಆ ನೀರನ್ನು ಕುಡಿದು ರುಚಿ ಮಾಡಿ, ಉತ್ತರ ತಿಳಿಸಲು ಹೇಳಿದ. 

ಆಕೆ ಹಿರಿಯರು ಹೇಳಿದ ಹಾಗೆ ಮಾಡಿದಳು, ಆ ಹುಡುಗಿ ಆ ನೀರನ್ನು ಕುಡಿದಳು, ಆ ನೀರು ಸಹಿಸಲಾರದಷ್ಟು ಉಪ್ಪು ಮಿಶ್ರಿತವಾಗಿರುವುದನ್ನು ಹೇಳಿದಳು. 

ನಂತರ, ಆ ಹಿರಿಯರು, ಮತ್ತೆ ಒಂದು ಹಿಡಿ ಉಪ್ಪನ್ನು ತಗೆದುಕೊಂಡು ಬರಲು ಹೇಳಿದರು, ಆ ಉಪ್ಪನ್ನು ಸಮೀಪದಲ್ಲಿರುವ ಕೆರೆಗೆ ಮಿಶ್ರಣಮಾಡಲು ಹೇಳಿದರು.

ನಂತರ, ಆಕೆಗೆ, ಕೆರೆಯ ನೀರನ್ನು ಕುಡಿದು, ರುಚಿ ತಿಳಿಸಲು ಹೇಳಿದರು. 

ಆಕೆ, ಕೆರೆಯ ನೀರನ್ನು ಕುಡಿದು, ಆ ನೀರು ತುಂಬ ಸಿಹಿಯಾಗಿದೆ ಎಂದು ಹೇಳಿದಳು. 


ಆಗ ಹಿರಿಯರು ಹೇಳಿದರು, ನೀನು ಒಂದು ಗಾಜಿನ ಲೋಟದಲ್ಲಿ ಬೆರೆಸಿದ ಉಪ್ಪಿನ ಪ್ರಮಾಣ ಮತ್ತು ಕೆರೆಯಲ್ಲಿ ಬೆರೆಸಿದ ಪ್ರಮಾಣ ಒಂದೇಆಗಿತ್ತು, ಆದರೆ ಅದರ ರುಚಿ ಬೇರೆ ಬೇರೆಯಾಗಿತ್ತು.

ಉಪ್ಪು ನಿಜ ಜೀವನದ ದುಃಖ, ನೋವುಗಳು, ಯಾಡರುತೊಡರುಗಳು ಇದ್ದಹಾಗೆ. 

ನೀರಿನ ಪ್ರಮಾಣ, ನೀನು ಯೋಚನೆ ಮಾಡುವ ವಿದಾನವಾಗಿರುತ್ತದೆ. 


ಈ ಕಥೆಯ ಮೂಲಕ ನಾನು ಹೇಳಲು ಹೊರಟಿರುವುದು ಏನೆಂದರೆ? ನಾವು ನಿಜ ಜೀವನದಲ್ಲಿ, ಚಿಕ್ಕ ದಾಗಿ ಯೋಚನೆ ಮಾಡಿದರೆ, ಸಮಸ್ಯೆ ದೊಡ್ಡದಾಗಿ ಕಾಣಿಸುತ್ತದೆ, ವಿಶಾಲವಾಗಿ ಯೋಚನೆ ಮಾಡುವುದನ್ನು ಅಬ್ಯಾಸ ಮಾಡಿಕೊಂಡರೆ, ಯಾವುದೇ ತೊಂದರೆ, ದುಃಖ, ನೋವುಗಳು, ಯಾಡರುತೊಡರುಗಳು ಬಂದರು ಸುಲಬವಾಗಿ ಪರಿಹಾರ ಕೊಡಬಹುದು. 


************************The End************************

Thursday, February 28, 2013

ಒಬ್ಬ ವ್ಯಕ್ತಿಯಾ ವ್ಯಕ್ತಿತ್ವ ತಿಳಿಯುವ ಮುನ್ನ, ವ್ಯಕ್ತಿತ್ವವನ್ನು ಅಳೆಯಬೇಡಿ......!





ಒಂದು ದಿನ ಒಬ್ಬ ತಂದೆ ಮತ್ತು ಮಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು, ಮಗನ ಯವಸ್ಸು ಸುಮಾರು ೨೪ ವರ್ಷಗಳಿರಬಹುದು ಎಂದುಕೊಳ್ಳಿ. 

ಅವರ ಮುಂದಿನ ಹಾಸನದಲ್ಲಿ ಒಂದು ಜೋಡಿ ಕುಳಿತಿತ್ತು. ಅವರು ಈ ತಂದೆ ಮಗನನ್ನು ಗಮನಿಸುತ್ತಿದ್ದರು.

ಮಗ ರೈಲಿನ ಕಿಟಕಿಯಬಳಿ ಕುಳಿತುಕೊಂಡು ಹೊರಗಡೆ ನೋಡುತ್ತಿದ್ದ. 

ಮಗ ತಂದೆಗೆ ಹೇಳಿದ, ಅಪ್ಪ ನೋಡಲ್ಲಿ ಗಿಡಗಳು ಮರಗಳು ನಮ್ಮ ಪಕ್ಕದಲ್ಲಿ ಓಡುತ್ತಿವೆ....! ಎಂದು. 

ಮುಂದೆಯೇ ಇದ್ದ ಆ ಜೋಡಿ ಮಾತಾಡಿಕೊಳ್ಳುತ್ತಿದ್ದರು, ನೋಡಿ ಆ ಹುಡುಗ ನೋಡಲು ೨೪ ವರ್ಷದವನ ಹಗೆ ಕಾಣುತ್ತಾನೆ, ಆದರೆ ಬುದ್ದಿ ಬ್ರಮಣೆಯಾಗಿರುವವನ  ಹಾಗೆ ಮಾತನಾಡುತಿದ್ದಾನೆ ಎಂದುಕೊಂಡರು.

ಆದೆ ಸಮಯದಲ್ಲಿ , ಮಗ ಮತ್ತೆ ಕೂಗಿ ಹೇಳಿದ, ಅಪ್ಪ ನೋಡಲ್ಲಿ ಮೋಡಗಳು ನಮ್ಮ ಜೊತೆ ಓಡುತ್ತಿವೆ....! ಎಂದ.

ಅದನ್ನ ಕೇಳಿಸಿಕೊಂಡ ಆ ಜೋಡಿ, ಅಪ್ಪನಿಗೆ ಹೇಳಿದರು, ನೀವು ನಿಮ್ಮ ಮಗನನ್ನು ಯಾವುದಾದರು ಒಂದು ಒಳ್ಳೆಯ ಆಸ್ಪತ್ರೆಗೆ ತೋರಿಸಿ... ಎಂದರು.

ಅದಕ್ಕೆ ಆ ಅಪ್ಪ ಉತ್ತರಿಸಿದ... ನಾನು ನನ್ನ ಮಗನನ್ನು  ಆಸ್ಪತ್ರೆಗೆ ತೋರಿಸಿದೆ, ಈಗ ನಾವಿಬ್ಬರು  ಅಲ್ಲಿಂದಾನೆ ಬರುತ್ತಿದೇವೆ.... 

ನನ್ನ ಮಗ ಹುಟ್ಟು ಕುರುಡನಾಗಿದ್ದ... ಮೊನ್ನೇತಾನೇ ಅವನಿಗೆ ಕಣ್ಣಿನ ಆಪರೇಷನ್ ಆಯಿತು.... ನನ್ನ ಮಗ ಇವತ್ತೇ ಈ ಜಗತ್ತನ್ನು ನೋಡುತ್ತಿರುವುದು ..... ಎಂದ. 

ಆ ಜೋಡಿ ಮೌನದಿಂದ ತಲೆತಗ್ಗಿಸಿದರು....!


ಈ ಕಥೆಯ ಮೂಲಕ ನಾನು ಹೇಳಲು ಬಯಸುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯಾ ಹಿಂದೆ ಒಂದೊಂದು ಕಥೆಯಿರುತ್ತದೆ. ದಯಮಾಡಿ ಸರಿಯಾಗಿ ತಿಳಿದು ಕೊಳ್ಳುವ ಮುನ್ನ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಡಿ.....!


*****************************The End***************************





Tuesday, November 29, 2011

ಪ್ರೀತಿ ಕುರುಡು ಆಸೆ ಮರುಳು.....


ಒಬ್ಬ ಕುರುಡ ಹುಡುಗ, ಒಬ್ಬ ಹುಡುಗಿಯನ್ನ ಪ್ರೀತಿಸುತ್ತಿದ್ದ.

ಒಂದು ದಿನ ಆ ಹುಡುಗಿ ಕೇಳಿದಳು, ನೀನು ನನ್ನನ್ನು ಮಾಡುವೆಯಾಗುತ್ತಿಯಾ?

ಅದಕ್ಕೆ ಆ ಹುಡುಗ ಹೇಳಿದ, ನಾನು ನಿನ್ನನ್ನು ಮದುವೆಯಾಗಲು ಇಷ್ಟವಿದೆ, ಆದರೆ ನಾನು ಕುರುಡ, ನಾನು ಯಾವಾಗ ನಿನ್ನನ್ನು ನೋಡಲು ಸಾದ್ಯ?

ಕೆಲವು ದಿನಗಳನಂತರ, ಆ ಹುಡುಗನಿಗೆ ಯಾರೋ ಒಬ್ಬರು ಕಣ್ಣುಗಳನ್ನು ದಾನ ಮಾಡಿದರು.

ಆ ಹುಡುಗ ತುಂಬಾ ಖುಷಿಯಾಗಿದ್ದ, ಆತನ ಪ್ರೇಯಸಿಯನ್ನು ನೋಡಲು . ಆ ಹುಡುಗ ತನ್ನ ಪ್ರೇಯಸಿಯ ಬಳಿ ಹೋಗಿ ನಿಂತ, ಆದರೆ ಆ ಹುಡುಗಿ ಕುರುಡಿಯಾಗಿದ್ದಳು.

ಆಗ ಆ ಹುಡುಗ ಆಕೆಯನ್ನು ಮದುವೆಯಾಗಲು ನಿರಾಕರಿಸಿದನು.

ಆ ಹುಡುಗಿ ಅವನಿದ್ದ ಸ್ಥಳದಿಂದ ಹೋಗುವಾಗ ಒಂದು ಮಾತು ಹೇಳಿ ಹೋದಳು...

"ನಿನ್ನ ಇಷ್ಟದಂತೆಯೇ ಆಗಲಿ, ಆದರೆ ದಯಮಾಡಿ ನನ್ನ ಕಣ್ಣುಗಳನ್ನು ಜೋಪಾನವಾಗಿ ನೋಡಿಕೋ ಎಂದು ಹೊರಟು ಹೋದಳು"

ಪ್ರೀತಿ ಕುರುಡು ಆಸೆ ಮರುಳು.....