ಅವರ ಮುಂದಿನ ಹಾಸನದಲ್ಲಿ ಒಂದು ಜೋಡಿ ಕುಳಿತಿತ್ತು. ಅವರು ಈ ತಂದೆ ಮಗನನ್ನು ಗಮನಿಸುತ್ತಿದ್ದರು.
ಮಗ ರೈಲಿನ ಕಿಟಕಿಯಬಳಿ ಕುಳಿತುಕೊಂಡು ಹೊರಗಡೆ ನೋಡುತ್ತಿದ್ದ.
ಮಗ ತಂದೆಗೆ ಹೇಳಿದ, ಅಪ್ಪ ನೋಡಲ್ಲಿ ಗಿಡಗಳು ಮರಗಳು ನಮ್ಮ ಪಕ್ಕದಲ್ಲಿ ಓಡುತ್ತಿವೆ....! ಎಂದು.
ಮುಂದೆಯೇ ಇದ್ದ ಆ ಜೋಡಿ ಮಾತಾಡಿಕೊಳ್ಳುತ್ತಿದ್ದರು, ನೋಡಿ ಆ ಹುಡುಗ ನೋಡಲು ೨೪ ವರ್ಷದವನ ಹಗೆ ಕಾಣುತ್ತಾನೆ, ಆದರೆ ಬುದ್ದಿ ಬ್ರಮಣೆಯಾಗಿರುವವನ ಹಾಗೆ ಮಾತನಾಡುತಿದ್ದಾನೆ ಎಂದುಕೊಂಡರು.
ಆದೆ ಸಮಯದಲ್ಲಿ , ಮಗ ಮತ್ತೆ ಕೂಗಿ ಹೇಳಿದ, ಅಪ್ಪ ನೋಡಲ್ಲಿ ಮೋಡಗಳು ನಮ್ಮ ಜೊತೆ ಓಡುತ್ತಿವೆ....! ಎಂದ.
ಅದನ್ನ ಕೇಳಿಸಿಕೊಂಡ ಆ ಜೋಡಿ, ಅಪ್ಪನಿಗೆ ಹೇಳಿದರು, ನೀವು ನಿಮ್ಮ ಮಗನನ್ನು ಯಾವುದಾದರು ಒಂದು ಒಳ್ಳೆಯ ಆಸ್ಪತ್ರೆಗೆ ತೋರಿಸಿ... ಎಂದರು.
ಅದಕ್ಕೆ ಆ ಅಪ್ಪ ಉತ್ತರಿಸಿದ... ನಾನು ನನ್ನ ಮಗನನ್ನು ಆಸ್ಪತ್ರೆಗೆ ತೋರಿಸಿದೆ, ಈಗ ನಾವಿಬ್ಬರು ಅಲ್ಲಿಂದಾನೆ ಬರುತ್ತಿದೇವೆ....
ನನ್ನ ಮಗ ಹುಟ್ಟು ಕುರುಡನಾಗಿದ್ದ... ಮೊನ್ನೇತಾನೇ ಅವನಿಗೆ ಕಣ್ಣಿನ ಆಪರೇಷನ್ ಆಯಿತು.... ನನ್ನ ಮಗ ಇವತ್ತೇ ಈ ಜಗತ್ತನ್ನು ನೋಡುತ್ತಿರುವುದು ..... ಎಂದ.
ಆ ಜೋಡಿ ಮೌನದಿಂದ ತಲೆತಗ್ಗಿಸಿದರು....!
ಈ ಕಥೆಯ ಮೂಲಕ ನಾನು ಹೇಳಲು ಬಯಸುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯಾ ಹಿಂದೆ ಒಂದೊಂದು ಕಥೆಯಿರುತ್ತದೆ. ದಯಮಾಡಿ ಸರಿಯಾಗಿ ತಿಳಿದು ಕೊಳ್ಳುವ ಮುನ್ನ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಡಿ.....!
*****************************The End***************************