Friday, December 31, 2010

ಸಂಪನ್ಮೂಲಗಳ ಉಪಯುಕ್ತತೆ!


ಒಂದು ದಿನ ಭಗವಾನ್ ಬುದ್ಧ ಪ್ರಪಂಚದ ಜನರ ಒಳಿತಿನ ಬಗ್ಗೆ ಬಹಳಾ ಆಳವಾಗಿ ಯೋಚನೆಮಾಡುತ್ತ ಕುಳಿತ್ತಿದ್ದರು, ಆಗ ಬುದ್ದ ಇರುವ ಜಾಗಕ್ಕೆ ಒಬ್ಬ ಭಕ್ತ ಬಂದು ಕೇಳಿದ, ಗುರುಗಳೇ ನೀವು ಪ್ರಪಂಚದ ಎಲ್ಲ ಜನರ ಒಳಿತಿಗಾಗಿ ತುಂಬಾ ಯೋಚನೆ ಮಾಡುತ್ತಿರ, ಆದರೆ ನಿಮ್ಮ ಭಕ್ತರ ಬಗ್ಗೆ ಯಾಕೆ ಯೋಚನೆ ಮಾಡುವುದಿಲ್ಲ? ಎಂದು ಕೇಳಿದ.

ಆಗ ಬುದ್ದ ಕೇಳಿದ!

ಬುದ್ದ: ಸರಿ ಶಿಷ್ಯ ಹೇಳು ನನ್ನಿಂದ ಏನು ಸಹಾಯ ಆಗಬೇಕು?

ಶಿಷ್ಯ: ಗುರುಜೀ ನನ್ನ ಬಟ್ಟೆ ತುಂಬಾ ಹಾಳಗಿಹೋಗಿದೆ, ತುಂಬಾ ಕೊಳಕು ಮತ್ತು ಹರಿದು ಹೋಗಿದೆ ಇದನ್ನು ತೊಡಲು ತುಂಬಾ ಮುಜುಗರವಾಗುತ್ತಿದೆ,  ನಾನು ಒಂದು ಒಳ್ಳೆ ಬಟ್ಟೆ ತೆಗೆದು ಕೊಳ್ಳಬಹುದಾ? ಎಂದು ಕೇಳಿದ.

ಆಗ ಬುದ್ದಶಿಷ್ಯನಕಡೆ ನೋಡಿ, ಆತನು ದರಿಸಿದ್ದ ಬಟ್ಟೆ ಹಾಳಾಗಿಹೊಗಿರುವುದನ್ನು ಗಮನಿಸಿ, ಅಲ್ಲಿಯೇ ಇದ್ದ ಒಬ್ಬ ಶಿಷ್ಯನನ್ನು ಕೇಳಿದ ಒಂದು ಜೊತೆ ಹೊಸ ಬಟ್ಟೆಗಳನ್ನು ಈತನಿಗೆ ನಿಡಿ ಎಂದು ಹೇಳಿದ. ಆಗ ಆ ಶಿಷ್ಯನು ಒಂದು ಜೊತೆ ಹೊಸ ಹುಡುಪುಗಳನ್ನೂ ತೆಗೆದುಕೊಂಡು ಆ ಶಿಷ್ಯನಿಗೆ ಕೊಟ್ಟ, ಆಗ ಆ ಶಿಷ್ಯನು ತನ್ನ ಮನೆಗೆ ಯಿಂದಿರುಗಿದ,

ಸ್ವಲ್ಪ ದಿನಗಳ ನಂತರ ಭಗವಾನ್ ಬುದ್ದ ಆತನ ಮನೆಗೆ ಅನಿರೀಕ್ಷಿತ ಬೇಟಿ ನೀಡಿದರು, ಬುದ್ದ ಕೇಳಿದರು ನಿನ್ನ ಹೊಸ ಹುದುಪುಗಳು ಸರಿಯಾಗಿವೆಯೇ, ಇನ್ನೂ ಏನಾದರು ಬೇಕಿದೆಯೇ? ಎಂದು ಕೇಳಿದರು.

ಆಗ ಶಿಷ್ಯ:  ಧನ್ಯವಾದಗಳು ಗುರುಗಳೇ ಹುಡುಪುಗಳು ಸರಿಯಾಗಿವೆ ನನಗೆ ಇಷ್ಟು ಸಾಕು, ಇನ್ನೇನು ಬೇಡ ಅಂದ.

ಆಗ  ಬುದ್ದ: ಶಿಷ್ಯ ಈಗ ನೀನು ಹೊಸ ಹುಡುಪುಗಳನ್ನು ಹೊಂದಿದ್ದಿಯ ಆದರೆ ಹಳೆಯ ಹುಡುಪುಗಳನ್ನು ಏನು ಮಾಡಿದೆ? ಎಂದು ಕೇಳಿದರು.

ಶಿಷ್ಯ:  ಗುರುಗಳೇ ಆ ಬಟ್ಟೆಗಳನ್ನು ತನ್ನ ಹಾಸಿಗೆಯ ಮೇಲೆ ಹಾಸಲು ಬಳಸುತ್ತಿದ್ದೇನೆ ಎಂದು ಹೇಳಿದ.

 ಬುದ್ದ:  ಹಾಗಾದರೆ ಹಳೆಯ ಹಾಸಿಗೆಯ ಬಟ್ಟೆ ನೀನು ಏಸದಿರಬಹುದು? ಅಲ್ಲವೇ.

ಆಗಶಿಷ್ಯ: ಇಲ್ಲ ಗುರುಗಳೇ ಅದನ್ನು ಕಿಟಕಿಗಳನ್ನು ಮುಚ್ಚಲು ಬಳಸುತ್ತಿದ್ದೇನೆ ಎಂದ.

ಬುದ್ದ: ಹಾಗದರೆ ಹಳೆಯ ಕಿಟಕಿ ಮುಚ್ಚಲು ಬಳಸುತ್ತಿದ್ದ ಬಟ್ಟೆಗಳು ಏನಾದವು?

ಆಗ ಶಿಷ್ಯ: ಆ ಬಟ್ಟೆಗಳನ್ನು ಅಡುಗೆಮನೆಯಲ್ಲಿ ಕರವಸ್ತ್ರಗಳನ್ನಾಗಿ ಬಳಸುತ್ತಿದ್ದೇನೆ ಎಂದ.


ಬುದ್ದ: ಹಾಗಾದರೆ ಹಳೆಯ ಕರವಸ್ತ್ರಏನಾಯಿತು?

ಆಗ  ಶಿಷ್ಯ: ಆ ಬಟ್ತೆಗಳನ್ನು ನೆಲವನ್ನು ವರಸಲು ಬಳಸಿದೆ.

ಬುದ್ದ: ಹಾಗದರೆ ಹಳೆಯ ಬಟ್ಟೆ ನೆಲವನ್ನೂ ವರಸಲು ಬಳಸುತ್ತಿದ್ದ ಬಟ್ಟೆಏನಾಯಿತು?


ಆಗ ಶಿಷ್ಯ:  ಗುರುಗಳೇ ಆ ಬಟ್ಟೆಗಳು ತುಂಬಾ ಹಳೆಯದಾಗಿದ್ದವು ನನಗೆ ಅವುಗಳನ್ನೂ ಏನು ಮಾಡಬೇಕು ಎಂದು ತಿಳಿಯಲಿಲ್ಲ, ಅದಕ್ಕೆ ನಾನು ಆ ಬಟ್ತೆಗಳನ್ನು ದೀಪದ ಬತ್ತಿಯಾಗಿ ಮಾಡಿ, ಈಗ ನಿಮ್ಮ ಕೋಣೆಯಲ್ಲಿ ಹತ್ತಿ ಹುರಿಯುತ್ತಿರುವ ದೀಪಕ್ಕೆ ಹಾಕಿದ್ದೇನೆ ಎಂದ.

ಆಗಬುದ್ದ ಮುಗುಳ್ನಗುತ್ತ ಆತನ ಮನೆಯಿಂದ ಹೊರಟರು.

ಗೆಳೆಯರೇ ಈ ಮೂಲಕ ನಿಮಗೆ ತಿಳಿಸಲು ಇಚ್ಚಿಸುವುದು ಏನೆಂದರೆ, ನಾವುಗಳು ಒಂದುವೇಳೆ ಇಷ್ಟೊಂದು ತರಹದ ಬಳಕೆ ಮಾಡದಿದ್ದರು ಕನಿಷ್ಠ ನಾವು ಪ್ರಯತ್ನ ಮಾಡಬೇಕು, ಭೂಮಿಯ ಮೇಲಿರುವ ಎಲ್ಲಾ ವಸ್ತುಗಳನ್ನೂ ನಾವು ತುಂಬಾ ಹೆಚ್ಚರವಾಗಿ ಬಳಸಬೇಕು, ವಸ್ತುಗಳು ಪ್ರಕೃತಿದತ್ತವಾದ ಅಥವಾ ಮಾನವ ನಿರ್ಮಿತ ಸಂಪನ್ಮೂಲಗಳಾಗಿರಬಹುದು, ನಾವು ಅವುಗಳನ್ನೂ ತುಂಬಾ ಹೆಚ್ಚರವಾಗಿ ಉಪಯೋಗಿಸಬೇಕು ಹಾಗ ಮಾತ್ರ ನಾವು ಮುಂದಿನ ಪಿಲಿಗೆಗಳಿಗೆಉಳಿಸಲು ಸಾದ್ಯ!!!!

 ********************************ದಿ ಎಂಡ್ ***********************************

Thursday, December 30, 2010

ಒಂದು ಕನಸು

ಸಾಮಾನ್ಯ ಜನರಿಗೂ ಮತ್ತು ರಾಜಕೀಯ ವೆಕ್ತಿಗಳಿಗೂ ಇರುವ ಮೂಲ ವ್ಯತ್ಯಾಸ!!!


ಒಂದು ದಿನ ಒಬ್ಬ ಹೂಗಳನ್ನು ಮಾರುವ ವೆಕ್ತಿ ತಲೆಕೂದಲು ಕತ್ತರಿಸು ಛೌರದ ಅಂಗಡಿಗೆ ಹೋದ, ಆತನ ಛೌರ ಮುಗಿದ ನಂತರ ಛೌರದವನಿಗೆ ಹಣವನ್ನು ಕೊಡಲು ಹಣವನ್ನು ಜೋಬಿನಿಂದ ತೆಗೆದ, ಆದರೆ ಆ ಛೌರಿಕನು ಹೇಳಿದ ನಾನು ಈ ವಾರ ನಾನು ಯಾರ ಬಳಿಯಲ್ಲಿಯೂ ಹಣ ತೆಗೆದುಕೊಲ್ಲುವುದಿಲ್ಲ, ಈ ವಾರ ಸೋಸಿಯಲ್ ಸರ್ವಿಸ್ ಮಾಡುತ್ತಿದ್ದೇನೆ ಅಂದ.

ಆಗ ಆ ಹೂವಿನ ಮನುಷ್ಯ ಆ ಜಾಗದಿಂದ ಮುಗುಳ್ನಗುತ್ತ ಹೊರಟ. ನಂತರ ನಾಳೆ ಬೆಳಿಗ್ಗೆ ಛೌರದ ಅಂಗಡಿಯ ಮುಂದೆ ಒಂದಿಷ್ಟು ಹೂ ಗುಚ್ಚಗಳನ್ನು ಮತ್ತು ಒಂದು ಧನ್ಯವಾದದ ಪತ್ರ ಬರೆದಿಟ್ಟು ಹೋಗಿದ್ದ. ಆಗ ಆ ಛೌರದ ಅಂಗಡಿಯ ಛೌರಿಕ ಬಂದು ಅಂಗಡಿಯ ಬಾಗಿಲು ತೆಗೆಯಲು ಬಂದಾಗ ಆತನು ಹೂಗಳನ್ನು ನೋಡಿತುಂಬಾ ಆಶ್ಚರ್ಯದಿಂದ ಅವುಗಳನ್ನೂ ನೋಡಿದ ಆತನ ಪತ್ರವನ್ನು ನೋಡಿ ತುಂಬಾ ಸಂತೋಷಗೊಂದನು.

ಮತ್ತೆ  ಓರ್ವ ಸಿಹಿ ತಿಂಡಿಗಳನ್ನು ಮಾರಾಟ ಮಾಡುವವ, ತಲೆಕೂದಲು ಛೌರ ಮಾಡಿಸಲು ಆತನ ಛೌರದ ಅಂಗಡಿಗೆ ಬಂದ, ಛೌರ ಮುಗಿಯಿತು ಯತಪ್ರಕಾರ ಈ ಸಿಹಿತಿಂಡಿ ಮಾರುವವ ಹಣ ಕೊಡಲು ಮುಂದಾದ, ಆಗ ಆ ಛೌರಿಕನು ನಿರಾಕರಿಸಿದ ಆತ ಹೇಳಿದ ಈ ವಾರ ನಾನು ಜನರ ಸೇವೆ (ಪುಬ್ಲಿಕ್ ಸರ್ವಿಸ್) ಮಾಡುತ್ತಿದ್ದೇನೆ ಎಂದು ಹೇಳಿದ, ಆಗ ಸಿಹಿತಿಂಡಿ ಮಾರುವವ ತುಂಬಾ ಸಂತೋಷದಿಂದ ಹಿಂದಿರುಗಿದ.

ಮಾರನೆಯ ದಿನ ಆ ಛೌರಿಕ ಮತ್ತೆ ತನ್ನ ಅಂಗಡಿಯನ್ನು ತೆರೆಯಲು ಬಂದಾಗ ಅಲ್ಲಿದ್ದ ಒಂದು ಸಿಹಿತಿಂಡಿಯ ಬಾಕ್ಸ್ ಮತ್ತು ಒಂದುಧನ್ಯವಾದದ ಪತ್ರ ನೋಡಿದ, ಆಗ ಮತ್ತೆ ಆ ಛೌರಿಕನಿಗೆ ಅದನ್ನು ನೋಡಿ ಮತ್ತೆ ತುಂಬಾ ಸಂತೋಷಗೊಂಡನು.

ಮತ್ತೆ ಒಂದು ದಿನದ ನಂತರ ಒಬ್ಬ ಕಾಲೆಜ್ ಪ್ರೋಫೆಸ್ಸೇರ್ ತನ್ನ ಕೂದಲನ್ನು ಛೌರ ಮಾಡಿಸಲು ಬಂದ, ಆಗ ಆ ಛೌರಿಕನು ಯಾತಪ್ರಕಾರ ತನ್ನ ಕೆಲಸ ಮುಗಿಸಿದ ಮತ್ತೆ ಆ ಪ್ರೊಫೆಸರ್ ಗೆ  ಯಾತಪ್ರಕರ ಹೇಳಿದ, ಆಗ ಆಪ್ರೊಫೆಸರ್ ಗೆಸಂತೋಷದಿಂದ ಹೊರ ಬಂದನು.

ಮಾರನೇಯ ದಿನ ಒಂದು ಪತ್ರ ಮತ್ತು ಒಂದು ಡಜನ್ ಬೇರೆ ಬೇರೆ ಪುಸ್ತಕಗಳನ್ನು ಇಟ್ಟು ಹೋಗಿದ್ದನು ಅದರಲ್ಲಿ ಆತನ ವ್ಯಾಪಾರದಲ್ಲಿ ಉಪಯುಕ್ತವಾಗುವ ಪುಸ್ತಕಗಳು ಇದ್ದವು, ಅವುಗಳನ್ನೂ ನೋಡಿ ತುಂಬಾ ಸಂತೋಷಗೊಂಡನು.

ಮತ್ತೊಂದು ದಿನ ಒಬ್ಬ ರಾಜಕೀಯ ವೆಕ್ತಿ, ಆತನು ಸರ್ಕಾರದ ಅತ್ಯಂತ ದೊಡ್ಡ ಹುದ್ದೆಯಲ್ಲಿ ಇರುವವನು ತನ್ನ ತಲೆಕೂದಲುಗಳನ್ನು ಛೌರ ಮಾಡಿಸಲು ಆತನ ಅಂಗಡಿಗೆ ಬಂದ, ಆ ಛೌರಿಕನು ತನ್ನ ಕೆಲಸವನ್ನೂ ಅತ್ಯಂತ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ, ಆಗ ಆ ರಾಜಕೀಯ ವೆಕ್ತಿ ತುಂಬಾ ಖುಷಿಯಿಂದ ಹಣ ನೀಡಲು ಮುಂದಾದ ಆಗ ಯತಾಪ್ರಕಾರ ಆ ಛೌರಿಕ  ನಿರಾಕರಿಸಿ ಸಾಮಾಜ ಸೇವೆಯ ಬಗ್ಗೆ ಹೇಳಿದ, ನಂತರ ಆ ರಾಜಕೀಯ ವೆಕ್ತಿ ಖುಷಿಯಿಂದ ಹೊರಹೊದನು.

ಮಾರನೆಯ ದಿನ ಆತನ ಅಂಗಡಿಯ ಮುಂದೆ ಒಂದು ಡಜನ್ ಜನ ರಾಜಕೀಯ ವೆಕ್ತಿಗಳು ಸಾಲಾಗಿ ನಿಂತಿದ್ದರು!

ಗೆಳೆಯರೇ ನಾನು ಈ ಮೂಲಕ ತಿಳಿಸುವುದೇನೆಂದರೆ ಸಾಮಾನ್ಯ ಜನರಿಗೂ ರಾಜಕೀಯ ವೆಕ್ತಿಗಳಿಗು ತುಂಬಾ ವ್ಯತ್ಯಾಸ ಇದೆ, ನಾವುಗಳು ರಾಜ್ಯವನ್ನೂ ಆಳುವವರನ್ನುಸರಿಯಾದವರನ್ನು ಆರಿಸಬೇಕು, ಆಗಲೇ ಈ ಪ್ರಜೆಗಳಿಂದ ನಿರ್ಮಿತವಾದ ಪ್ರಜಾಪಭುತ್ವಕ್ಕೆ ಒಂದು ಅರ್ಥ ಸಿಗುವುದು, ದಯಮಾಡಿ ಸರಿಯಾದವರಿಗೆ ಮತ ನಿಡಿ ಒಳ್ಳೆಯವರನ್ನು ರಾಜ್ಯವನ್ನು ಆಳಲು ಅವಕಾಶ ನಿಡಿ!!!!!

*****************************ದಿ ಎಂಡ್ *********************************

ಮುಂದುವರೆಯುವುದು.....