Monday, January 31, 2011

ಮಾನವಿಯಥೆ ಎಂದೂ ಕೈಬಿದುವುದಿಲ್ಲ.............

ಹಲೋ ಗೆಳೆಯರೇ,

ಒಂದು ದಿನ ಒಬ್ಬ ಬಡ ಹುಡುಗ ತನ್ನ ಓದಿನ ಸಲುವಾಗಿ ಶಾಲೆಗೆ ಹಣಪಾವತಿಸಬೇಕಾಗಿತ್ತು, ಆ ಬಾಲಕನು ಕೆಲಸಮಾಡುತ್ತ ಹಣ ಸಂಪಾದಿಸುತ್ತಿದ್ದ ಹಾಗೆ ಶಾಲೆಗೇ ಹಣ ಪಾವತಿಮಾಡಿ ಕಷ್ಟಪಟ್ಟು ಓದುತ್ತಿದ್ದ. ಒಂದು ದಿನ ಆ ಬಾಲಕ ಕೆಲವು ದಿನ, ದಿನಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುತ್ತಾ ಮನೆ ಮನೆಗೂ ಹೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸ್ವಲ್ಪ ಹಣವನ್ನು ಸಂಪಾದಿಸಿದ, ಆ ಹಣ ಶಾಲೆಗೇ ಪಾವತಿ ಮಾಡಲು ಸ್ವಲ್ಪ ಕಡಿಮೆ ಇತ್ತು, ಆ ದಿನದ ವ್ಯಾಪಾರ ಮುಗಿಯಿತು ಆದರೆ ಆತನಿಗೆ ತುಂಬಾ ಹೊಟ್ಟೆ ಹಸಿದಿತ್ತು ಆದರೆ ಆತನು ಊಟ ಮಾಡುವಷ್ಟು ಹಣ ಆತನ ಬಳಿ ಇರಲಿಲ್ಲ, ರಾತ್ರಿಬೇರೆ ಆಗುತ್ತಿತ್ತು, ಏನು ಮಾಡುವುದು ಎಂಬುದು ತಿಳಿಯದೆ ಒಂದು ಮನೆಯ ಬಾಗಿಲನ್ನು ತಟ್ಟಿದನು, ಮನಸ್ಸಿನಲ್ಲೇ ದೇವರನ್ನು ನೆನೆಯುತ್ತ, ಆ ಮನೆಯಿಂದ ಒಂದು ವಯಸ್ಸಾದ ತಾಯಿ ಅಥವಾ ತಂದೆ ಬಂದು ಕದವನ್ನುತೆಗೆದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತ ಕದವನ್ನು ತಟ್ಟಿದ.

ಆಗ ಆ ಮನೆಯಿಂದ ಒಂದು ಸುಂದರ ಹುಡುಗಿ ಬಂದು ಬಾಗಿಲನ್ನು ತೆಗೆದಳು, ಆಕೆಯನ್ನು ನೋಡಿ ಆ ಹುಡುಗ, ಊಟ ಕೇಳಲು  ಆಗದೆ ಅನುಮಾನದಿಂದ, ಆಕೆಯನ್ನು ಒಂದು ಲೋಟ ನೀರನ್ನು ಕೇಳಿದ, ಆಗ ಆಕೆಯು ಆತನನ್ನು ಸರಿಯಾಗಿ ಗಮನಿಸಿ ಆತನು ತುಂಬಾ ಹಸಿವಿನಿಂದ ಇರುವುದನ್ನು ನೋಡಿ, ಒಂದು ದೊಡ್ಡ ಲೋಟದಲ್ಲಿ ಹಸುವಿನ ಹಾಲನ್ನು ತುಂಬಿ ತಂದು ಕೊಟ್ಟಳು. ಆಗ ಆ ಬಾಲಕ ಆಶ್ಚರ್ಯದಿಂದ ಅದನ್ನು ಸ್ವಿಕರಿಸಿದನು, ಆನಂತರ ಆ ಬಾಲಕ ದನ್ಯವಾದ ಏಳಿ ಸ್ವಲ್ಪ ಹಣ ಕೊಡಲು ಮುಂದಾದನು, ಆದರೆ ಆ ಬಾಲಕಿ ಆ ಹಣವನ್ನು ನಿರಾಕರಿಸಿದಳು, ಹಾಗೆ ಆಕೆ ಹೇಳಿದಳು ನನ್ನ ತಾಯಿ ಹೇಳಿದ್ದರೆ ಯಾರಬಳಿಯಲ್ಲೂ ಹಣ ಪಡಿಯಬಾರದು ಸಹಾಯ ಮಾಡಿದ್ದಕ್ಕೆ ಎಂದಳು, ಆಗ ಆ ಬಾಲಕ ತುಂಬಾ ಸಂತೋಷನಿದಿಂದ ಮನೆಗೆ ಹೋದ.


ಆ ಬಾಲಕನ ಹೆಸರು ಹಾರ್ವರ್ಡ್ ಕೆಲ್ಲಿ.

ಕೆಲವು ವರ್ಷಗಳ ನಂತರ ಆ ಹುಡುಗಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಳು ಆಗ ಆಕೆಯನ್ನು ಒಂದು ಆಸ್ಪತ್ರೆಗೆ ಸೇರಿದ್ದಳು, ಆ ಕಾಯಿಲೆಯು ತುಂಬಾ ದೊಡ್ದದಾಗಿದ್ದರಿಂದ ಒಬ್ಬ ಹಿರಿಯ ಆರೋಗ್ಯ ತಜ್ಞರನ್ನು ಕರೆಸಿ, ಆಕೆಯ ಕಾಯಿಲೆಯನ್ನು ಅದ್ಯಯನ ಮಾಡಲು ನಿರ್ದರಿಸಿದರು, ಹಾಗೆಯೇ ಒಬ್ಬ ಹಿರಿಯ ವೈಧ್ಯಕಿಯ ಬಂದರು ಅವರು ಬೇರೆಯಾರು ಆಗಿರಲಿಲ್ಲ, ಅವರು ಹಾರ್ವರ್ಡ್ ಕೆಲ್ಲಿ.

ಡಾ.ಕೆಲ್ಲಿ ಯವರು ಆಕೆಯನ್ನು ನೋಡಿ ಆಕೆಯನ್ನು ಗುರುತಿಸಿದರು, ಆಕೆಯ ಕಾಯಿಲೆಯ ಬಗ್ಗೆ ವಿಶೇಷ ಕಾಳಜಿ ಹೊಯಿಸಿ, ಆಕೆಯನ್ನು ಕಾಯಿಲೆಯಿಂದ ಹುಷಾರ್ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಕೊನೆಗೂ ಡಾ.ಕೆಲ್ಲಿ ಗೆದ್ದೆಬಿಟ್ಟರು ಆಗೆಯೇ ಸ್ವಲ್ಪ ದಿನಗಳಲ್ಲಿ ಆಕೆಯ ಕಾಯಿಲೆ ಹುಷಾರ ಹಾಗಿಬಿಟ್ಟಿತು, ಆಕೆಗೆ ಹೆಚ್ಚರ ಬಂದಾಗ ಆ ಆಸ್ಪತ್ತ್ರೆಯನ್ನೂ ನೋಡಿ ತುಂಬಾ ಭಯಬೀತಳಾಗಿ, ಆಕೆಯ ಕಾಯಿಲೆ ಹುಷಾರ್ ಆಗಿ, ಆ ಆಸ್ಪತ್ರೆಯ ಬಿಲ್ ಪಾವತಿ ಮಾಡಲು ತನ್ನ ಜೀವಮಾನವನ್ನೇ ಮುಡುಪಾಗಿ ಇಡಬೇಕಾಗುತ್ತದ್ದೆ ಎಂದು ಯೋಚಿಸುತ್ತ ದುಃಖಿಸುಟ್ಟಿದ್ದಳು.

ಡಾ.ಕೆಲ್ಲಿ ಯವರು ಆ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ ಆಕೆಯ ಬಿಲ್ ಗಳನ್ನು ಅವರಿಗೆ ಕಳಿಸಲು ಹೇಳಿದರು, ಹಾಗೆಯೇ ಡಾ.ಕೆಲ್ಲಿ ಆ ಬಿಲ್ ಪಾವತಿಸಿದರು, ನಂತರ ಆಕೆಯ ಬಿಲ್ ಗಳನ್ನು ಆಕೆಗೆ ಕಳುಯಿಸಿಕೊಟ್ಟರು, ಆ ಬಿಲ್ ನ ಕೆಳಕೆ ಡಾ. ಹಾರ್ವರ್ಡ್ ಕೆಲ್ಲಿ ಯವರು ಬರೆದಿದ್ದರು " ಹಣ ಪಾವತಿಸಿದೆ ಒಂದು ಲೋಟದ ಹಾಲಿನಿಂದ" ಎಂದು ಬರೆದಿದ್ದರು.


ಆ  ಬಿಲ್ ನ್ನು ನೋಡಿ, ಡಾ.ಹಾರ್ವರ್ಡ ಕೆಲ್ಲಿ ಯವರು ಬರೆದಿರುವುದನ್ನು ನೋಡಿ ಆಕೆಯ ಕಣ್ಣುಗಳು ಕಣ್ಣಿರಿನಿಂದ ತುಂಬಿಕೊಂಡು ದೇವರನ್ನು ಅಭಿನಂದಿಸಿದಳು

ಗೆಳೆಯರೇ ಈ ಮೂಲಕ ನಿಮಗೆ ತಿಳಿಸುವುದೆನಿಂದರೆ, ನೀವು ಮಾಡುವ ಸಹಾಯಕ್ಕ ಯಾವ ನಿರೀಕ್ಷೆ ಇಲ್ಲದೆ ಸಹಾಯ ಮಾಡಿ, ಆ ಸಹಾಯ ನಿಮ್ಮನ್ನು ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮನ್ನು ಕೈ ಬಿಡುವುದಿಲ್ಲ.

*****************************ದಿ ಎಂಡ್ *******************************