Sunday, October 10, 2010

ಕೇವಲ ಒಂದೇ ಒಂದು ರೂಂ ಗಾಗಿ,,,,,?????

ಹಲೋ! ಸ್ನೇಹಿತರೆ,
ಈ ಒಂದು ಕಥೆ ಒಬ್ಬಶಿಕ್ಷಕನ ನೈಜ ಕಥೆಯಾಗಿದೆ! ಈ ಬೆಂಗಳೊರಿನಲ್ಲಿ ಒಬ್ಬ ಶಿಕ್ಷಕನಿದ್ದ ಅವನು ತುಂಬ ಕಷ್ಟಪಟ್ಟು ಶಿಕ್ಷಕನಾಗಿದ್ದ ಆತನ ಜಿವನವನ್ನು ಮಕ್ಕಳಿಗೆ ಒಳ್ಳೆಯ ಶಿಕ್ಷಣನೀಡುವುದಕ್ಕೆ ಮುಡುಪಾಗಿಟ್ಟಿದ್ದ. ನಿಮಗೆ ತಿಳಿದಿರುವಂತೆ ಶಿಕ್ಷಕರು ನಮ್ಮ ಜೀವನ ವನ್ನು ಸರಿಯಾದ ದಾರಿಯಲ್ಲಿ ಹೋಗುವ ಹಾಗೆ ಶಿಕ್ಷಣ ಕೊಡುವುವವರು ಆದ್ದರಿಂದಲೇ ನಾವುಗಳು ಅವರಿಗೆ ತುಂಬ ಗೌರವವನ್ನೂ ನೀಡುತ್ತೇವೆ, "ಹರ ಮುನಿದರೆ ಗುರು ಕಾಯುವ" ಎಂಬ ಮಾತು ಅಷ್ಟೇ ಸತ್ಯ, ಈ ತರಹದ ಒಬ್ಬ ಶಿಕ್ಷಕನಿಗೆ ಒಬ್ಬ ಮಗನಿದ್ದ ಅವರ ಕುಟುಂಬ ತುಂಬ ಚಿಕ್ಕದು ಅವರ ಕುಟುಂಬದಲ್ಲಿ ಅವನ ಹೆಂಡತಿ ಮತ್ತು ಒಬ್ಬ ಮಗ ಒಂದು ಚಿಕ್ಕ ಸಂಸಾರ, ನಿಮಗೆ ತಿಳಿದಿರುವಂತೆ ಒಬ್ಬ ಪ್ರಾರ್ಥಮಿಕ ಶಾಲೆಯ ಶಿಕ್ಷಕನಿಗೆ ಆಗಿನ ತಿಂಗಳ ವರಮಾನ ತುಂಬ ಕಡಿಮೆ ಇತ್ತು ಆತನ ತಿಂಗಳ ವರಮಾನದೆಂದಲೇ ಆತನ ಸಂಸಾರವನ್ನು ತುಗಿಸಬೇಕಿತ್ತು, ಆತನ ಗುರಿ ಎರಡೇ ಎರಡು ಆಗಿತ್ತು! ಮೊದಲನೆಯದು ಆತನ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಹಾಗು ಎರಡನೆಯದು ಒಂದು ಚಿಕ್ಕ ಸ್ವಂತ ಮನೆಯನ್ನೂ ಕಟ್ಟುವುದು! ಆತನ ಜೀವನದ ಗುರಿಯಾಗಿತ್ತು. ಈ ಶಿಕ್ಷಕ ತುಂಬ ಕಷ್ಟಪಟ್ಟು ಮಗನನ್ನು ಒಂದು ಒಳ್ಳೆಯ ವಿಧ್ಯಾವಂತ ನನ್ನಾಗಿ  ಮಾಡಲು ತುಂಬ ಪ್ರಯತ್ನ ಪಟ್ಟ, ಆತ ಮತ್ತು ಆತ ಹೆಂಡತಿ ಹಸಿವಿನಿಂದಿದ್ದರು ಆತನ ಮಗನಿಗೆ ಒಂದು ದಿನವು ಹಸಿವಿನ ಪರಿಚಯ ಮಾಡಿಸಿರಲಿಲ್ಲ, ತುಂಬ ಕಷ್ಟ ಪಟ್ಟು ಆತನ ತಿಂಗಳ ವರಮಾನದಲ್ಲಿ ಸ್ವಲ್ಪ ಸ್ವಲ್ಪ ಹುಳಿಸಿ ಒಂದು ಚಿಕ್ಕ ಸೈಟ್ಅನ್ನು ಕೊಂಡುಕೊಂಡ ಆಗಆತನ ಜೀವನದ ಆಸೆಗಳೆಲ್ಲ ನೆರವೇರುವ ಕನಸು ಹೆಚ್ಚು ಹೆಚ್ಚು ಕಾಣ ತೊಡಗಿದ.

ಅದೆರಿತಿಯಾಗಿ  ಆತನ ಮಗನು ಚೆನ್ನಗಿಹೆ ಓದುತಿದ್ದ, ದಿನಗಳು ಹುರುಲಿದವು ವರ್ಷಗಳು ಕಳೆದವು ಮಗನು ಕಾಲೇಜು ಮೆಟ್ಟಿಲು ಹೇರಿದ ಹಾಗೆಯೇ ಈ ಶಿಕ್ಷಕ ಮಗನಿಗೆ ಬೇಕಾದವುಗಳನ್ನೆಲ್ಲ ಹೋದಗಿಸಿದ, ಒಂದುವೇಳೆ ಆತನಿಗಿಲ್ಲದಿದ್ದರು  ಆತನ ಮಗನಿಗೆ ಯಾವುದನ್ನೂ ಕಡಿಮೆ ಮಾಡಲಿಲ್ಲ, ಈ ಸಮಯದಲ್ಲೇ ಆತ ಒಂದು ಪುಟ್ಟ ಮನೆಯನ್ನೂ ಕಟ್ಟಿದ, ಆ ಮನೆಯಲ್ಲಿ ಒಂದು ಹಡುಗೆ ಕೋಣೆ, ಒಂದು ಅಟ್ಟಚ್ ಬಾತ್ ರೂಂ, ಒಂದು ನಡುಮನೆ ಹಾಗು ಒಂದು ಮಲಗುವ ಕೋಣೆ, ಅದೊಂದು ಕಿಕ್ಕವಾದ ಚೊಕ್ಕವ ಮನೆಯನ್ನೂ ಆತ ಕಟ್ಟಿಸಿದ, ಆತನ ಮನೆಯಲ್ಲಿನ ಒಂದು ಕೋಣೆಯನ್ನು ಆತನ ಮಗನಿಗಾಗಿ ಕೊಟ್ಟ ಆ ಕೋಣೆಯಲ್ಲಿ ಮಗನಿಗೆ ಓದಲು ಬೇಕಾದ ವಸ್ತುಗಳ  ವೆವಸ್ಥೆ ಗಳೆಲ್ಲವನ್ನೂ ಹೋದಗಿಸಿಕೊಟ್ಟ.

ಆತನ ಮಗನು ಕೂಡ ತಂದೆಗೆ ಓದಿನಲ್ಲಿ ಎಂದು ನಿರಾಷೆ ಮೂಡಿಸಲಿಲ್ಲ, ಮಗನು ಎಲ್ಲ ಸಬ್ಜೆಕ್ಟ್ ಗಳಲ್ಲೂ ರಾಂಕ್ ತೆಗೆದುಕೊಳ್ಳುತ್ತಿದ್ದ, ತಂದೆ ಕನಸುಕಂಡತ್ತೆಯೇ ಆತನು ಒಂದು ದಿನ ಇಂಜಿನಿಯರಿಂಗ್ ನಲ್ಲಿ ರಾಂಕ್ ಅಂಕಗಳನ್ನು ಪಡೆಯುವಮುಲಕ ಪದವಿದರನಾದ. ಆ ಸಮಯದಲ್ಲಿ ತಂದೆಯ ಖುಷಿ ಮತ್ತು ಸಂತಸ ಆಗಸಕ್ಕೆ ಮೂಟ್ಟಿತ್ತು, ತಂದೆಯ ಎರಡನೇಯ ಕನಸೂ ನನಸಾಗಿತ್ತು! ನಿಮಗೆ ಈ ಕಥೆಯನ್ನು ಓದುತ್ತ, ಈ ಕಥೆಯಲ್ಲಿ ಏನು ಇದೆ ಹನ್ನಿಸಬಹುದು, ಈ ಕಥೆಗೆ ಟ್ವಿಸ್ಟ್ ಸಿಗುವುದೇ ಇಲ್ಲಿಂದ, ನಾನು ಯಾಕೆ ಇದೆಲ್ಲ ಹೇಳಿದೆ ಅಂದರೆ ಮಕ್ಕಳಿಗೆ ತಂದೆ ತಾಯಿಯರ ಮನಸ್ಸು, ಪ್ರೀತಿ, ಅವರ ತ್ಯಾಗ ಕೆಲ ಮಕ್ಕಳಿಗೆ ಅರ್ಥವೇ ಹಾಗುವುದಿಲ್ಲ, ಇಲ್ಲಿಯವರೆಗೂ ತಂದೆ ಪಟ್ಟ ಕಷ್ಟ ಏನು ಹನ್ನಿಸಿರಲಿಲ್ಲ, ಆತನ ಕಷ್ಟಗಳನ್ನೆಲ್ಲ ಪ್ರೀತಿಸುತ್ತ, ಎಲ್ಲ ಕಷ್ಟಗಳನ್ನೆಲ್ಲ ಎದರಿಸುತ್ತ, ತನ್ನ ಮಕ್ಕಳ ಆಸೆಗಳನ್ನು ಪುರೈಸುತ್ತ ಬಂದಿದ್ದ.

      ಅದೊಂದು ದಿನ ಆತನ ಮಗನಿಗೆ ವಿದೇಶದಿಂದ ಜಾಬ್ ಆಫರ್ ಬಂತು, ಮಗನು ಸಂತಸದಿಂದ ತಂದೆ ತಾಯಿಯರಿಗೆ ತಿಳಿಸಿದ ಆದರೆ ಅವರಿಗೆ ಇಷ್ಟವಿರಲಿಲ್ಲ, ಅವರಿಗೆ ತಮ್ಮ ಮಗ ತಮ್ಮ ಬಳಿಯಲ್ಲಿಯೇ ಇದ್ದು ಕೆಸಮಾಡಿಕೊಂಡು ನೆಮ್ಮದಿಯ ಜೀವನ ನಡೆಸುವಂಥಹ ಆಸೆಯಾಗಿತ್ತು. ಆದರೆ ಮಗನು ತುಂಬ ಹಠಮಾಡಿ ತಂದೆ ತಾಯಿಯರನ್ನು ಒಪ್ಪಿಸಿದನು, ಕೊನೆಗೆ ವಿಧಿ ಇಲ್ಲದೆ ತಂದೆ ತಾಯಿಯರು ಮನಸಿಲ್ಲದ ಮನಸಿನಲ್ಲಿ ಒಪ್ಪಿಕೊಂಡರು, ಆತನು ವಿದೇಶಕ್ಕೆ ತೆರಳಿದ ಆತನ ಮನಸ್ಸಿನಲ್ಲಿ ಖುಷಿ ಹೇಳತೀರದಾಗಿತ್ತು, ಆತನು ವಿದೇಶಕ್ಕೆ ಹೋಗಿ ಸ್ವಲ್ಪ ದಿನಗಳು ಕಳೆದ ನಂತರ ಆತ ಪ್ರತಿದಿನವು ತಂದೆ ತಾಯಿಯರಿಗೆ ಫೋನ್ಮಾಡಿ ಮಾತನಾಡಿಸುತ್ತಿದ್ದ, ಇಗೆಹೆ ದಿನಗಳು ತಿಂಗಳುಗಳು ಹುರುಲಿದವು, ಪ್ರತಿ ದಿನ ಮಾಡುತ್ತಿದ್ದ ಫೋನ್ ಕಾಲ್, ವಾರಕ್ಕೆ ಒಂದು ಫೋನ್ ಕಾಲ್ ಆಗಿ ಪರಿವರ್ಥನೆಗೊಂಡವು, ಹಾಗೆಯೇ ಕೆಲದಿನಗಳ ನಂತರ ತಿಂಗಳಿಗೆ ಒಂಮ್ಮೆ ಕಾಲ್ ಆಗಿ ಪರಿವರ್ತನೆಗೊಂಡಿತು, ಇಲ್ಲಿ ತಂದೆ ತಾಯಿಯರು ಆತನ ಯೋಗಕ್ಷೇಮದ ಫೋನ್ ಕಾಲ್ ಗಳನ್ನೇ ನಿರಿಕ್ಷಿಸುತ್ತ ಇರುತ್ತಿದ್ದರು, ಕೆಲ ಕಾಲಗಳ ನಂತರ ಮಗನ ಫೋನ್ ಕಾಲ್ ಗಳು ೬ ತಿಂಗಳಿಗೊಮ್ಮೆ ವರ್ಷಕ್ಕೆ ಒಮ್ಮೆ ಬರಲು ಪ್ರರಂಬಿಸಿದವು,ಇಲ್ಲಿ ತಂದೆ ತಾಯಿಗಳು ಮಗನ ಎದುರುನೋಡುತ್ತಲೇ ತಮ್ಮ ಜೀವನ ಸಾಗಿಸುತ್ತಿದ್ದರು, ಹೀಗೆ ದಿನಗಳು ಕಳೆದಹಾಗೆ ಅವರಿಗೆ ಆನಾಥ ಪ್ರೆಜ್ಞೆ ಬೆಳೆಯುತ್ತ ಹೋಯಿತು. ಅಲ್ಲಿ ಮಗ ತನ್ನ ಕೆಲಸದಲ್ಲಿ ಬ್ಯುಸಿ ಆಗಿಬಿಟ್ಟ ಹೆದ್ದರು ದುಡಿಮೆ ಮಲಗಿದರು ದುಡಿಮೆ, ಅವನಿಗೆ ಅವನ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡುವುದನ್ನೇ ಬಿಟ್ಟುಬಿಟ್ಟ, ಒಂದು ದಿನ ಮಗ ಅವನಿದ್ದ ಜಾಗದಲ್ಲಿಯೇ ಒಂದು ಹುಡುಗಿಯನ್ನು ನೋಡಿ ಮದುವೆಯೂದ ಆದರೆ ಅವನ ತಂದೆ ತಾಯಿಯರಿಗೆ ತಿಳಿಸಲಿಲ್ಲ, ಕೇವಲ ಫೋನಿನಲ್ಲಿ  ಕಾಲ್ ಮಾಡಿ ತಿಳಿಸಿದ, ಆಗ ತಂದೆ ತಾಯಿಯರಿಗೆ ಮಗನ ಮೇಲಿದ್ದ ಸಂಪೂರ್ಣ ನಂಬಿಕೆ ಹೊಯಿತು, ಪೂರ್ತಿ ಆನಾಥಪ್ರಜ್ಞೆ ಬಂತು.

   ಇಗೆ ಅಲ್ಲಿ ಮಗ ದುಡಿಮೆಯಲ್ಲಿ ಸಂಪೂರ್ಣ ಮಗ್ನನಾದ, ಆತನು ಜೀವನದಲ್ಲಿಯೇ ಹಣ ಒಂದೇ ಮುಖ್ಯ ಎಂಬ ಬಾವನೆ ಮನದಲ್ಲಿಯೇ ಬೆಳೆಸಿಕೊಂಡ. ಆತನಿಗೂ ಒಂದು ಮಗುಹಾಯಿತು ಮಗು ಹುಟ್ಟಿದ್ದನ್ನು  ಒಂದು ಫೋನ್ ಕಾಲ್ ಮೂಲಕ ತಂದೆ ತಾಯಿರರಿಗೆ ತಿಳಿಸಿದ, ಆ ಕ್ಷಣ ತಂದೆ ತಾಯಿಯರಿಗೆ ಮೊಮ್ಮಗನನ್ನು ನೋಡುವ ಆಸೆ ತುಂಬ ಬೆಳೆದಿತ್ತು, ಆದರೆ ಅವರಿಗೆ ನೋಡುವ ಅವಕಾಶವೇ ಇರಲಿಲ್ಲ, ಅವರು ಮನಸ್ಸಿನಲ್ಲಿಯೇ ದುಃಖಿಸುತ್ತ, ಕಾಲ ಕಳೆಯುತ್ತ ಜೀವನ ನಡೆಸುತ್ತಿದ್ದರು. ಇಗೆಯೇ ಕೆಲ ವರ್ಷಗಳ ನಂತರ ತಾಯಿ ತೀರಿಕೊಂಡ ವಿಷಯ ಮಗನಿಗೆ ತಿಲಿಯುತ್ತದೆ ಆದರೆ ಮಗನು ತಾಯಿಯ ಅಂತಿಮ ದರ್ಶನಕ್ಕೂ ಬರಲು ಹಾಗುವುದಿಲ್ಲ, ಆತನು ಕೇವಲ ಕೆಲಸದ ಕಡೆಯಲ್ಲಿಯೇ ಬ್ಯುಸಿ ಆಗಿಬಿಟ್ಟ, ಈ ಆಗಥವನ್ನು ತಡೆಯಲಾರದೆ ತಂದೆಯು ತೀರಿಕೊಂಡ ಹಾಗಲೂ ಮಗ ನೋಡಲು ಬರಲು ಸಾಧ್ಯವಾಗಲಿಲ್ಲ.ಮನಸ್ಸಿನಲ್ಲಿಯೇ ದುಃಖ ಪಟ್ಟು ತಂದೆ ತಾಯಿಯರಿಗೆಶಾಂತಿ ಕೋರಿ ಆತನು ತನ್ನ ಕೆಲಸದಲ್ಲಿ ಮಗ್ನನಾದ, ಹಿಗೆಯೇ ಕೆಲ ವರ್ಷಗಳು ಕಳೆದವು, ಆತನು ಕೂಡಿಟ್ಟಿದ್ದ ಹಣವನ್ನೆಲ್ಲ ಕೆಲವು ಕಂಪನಿ ಗಳಲ್ಲಿ ಇನ್ವೆಸ್ಟ್ ಮಾಡಿದ, ಆತನು ಹಣ ಹಾಕಿ ಕೆಲವು ವರ್ಷಗಳು ಕಳೆದವು, ಆತನಿಗೂ ವಯಸ್ಸು ೪೦ ಮುಗಿಯುತ್ತ ಬಂದಿತು, ಮಗನು ಬೆಳೆದು ದೊಡ್ಡವನಾಗಿದ್ದ, ಆದರೆ ಆತನ ಮಗ ಆತನ ಮಾತುಗಳನ್ನೂ ಕೇಳುತ್ತಿರಲಿಲ್ಲ ಆ ಸಮಯದಲ್ಲಿ ಅವನಿಗೂ ಆತನ ತಂದೆ ನೆನಪಾಗುತ್ತಿತ್ತು.

    ಕೆಲವು ವರ್ಷಗಳ ನಂತರ ಆತನಿಗೆ ಎಲ್ಲೊ ಏನೋ ಕೊರಗು ಶುರುವಾಗಿತ್ತು, ಅದು ಆತನು ತನ್ನ ಸಂಸಾರವನ್ನು ಕರೆದುಕೊಂಡು ನನ್ನ ತಾಯಿನಾಡಿಗೆ ವಾಪಾಸ್ ಹಾಗುವ ಯೋಚನೆ ಬಲವಾಗಿ ಮುಡತೊಡಗಿತ್ತು, ಆದರೆ ಆತನ ಹೆಂಡತಿ ಮತ್ತು ಮಗನು ಆತನ ಜೊತೆಯಲ್ಲಿ ಬರಲು ನಿರಾಕರಿಸಿದರು, ಆತನಿಗೆ ಆಗ  ಆನಾಥ ಪ್ರಜ್ಞೆ ಶುರುವಾಯಿತು, ಮಗನು ಆತನ ಮಾತುಗಳನ್ನೂ ಕೇಳುತ್ತಿರಲಿಲ್ಲ, ಹೆಂಡತಿ ಆತನ ಮೇಲಿನ ವ್ಯಮೊಹವನ್ನು ಕಳೆದುಕೊಂಡಳು, ಹೆಂಡತಿಯು ಸ್ವಲ್ಪ ಸ್ವಲ್ಪ ದ್ವೇಷಿಸ ತೊಡಗಿದಳು, ಆ ಸಮಯದಲ್ಲಿ ಆತನಿಗೆ ಸಂಪೂರ್ಣ ಆನಾಥ ಪ್ರಜ್ಞೆ ಹುಟ್ಟಿ ಜೀವನ ಜಿಗುಪ್ಸೆಯಾಗತೊಡಗಿತು , ಅತ್ತ ಮಗನು ಮಾತು ಕೆಳುವುದಿಲ್ಲ, ಇತ್ತ ಹೆಂಡತಿಯೂ ಇಷ್ಟ ಪಡುವುದಿಲ್ಲ, ಆತನಿಗೆ ತುಂಬಾ ಒಂಟಿತನ ಕಾಡುತ್ತಿತ್ತು, ಕೆಲ ತಿಂಗಳು ಕಾದು, ಆತನು ಇನ್ವೆಸ್ಟ್ ಮಾಡಿದ್ದ ಹಣವನ್ನೂ ವಾಪಸ್ಸು ತಿಗಿಯಲು ನಿರ್ದಾರ ಮಾಡಿದ, ಆದರೆ ಅಲ್ಲಿ ಅವನಿಗೆ ಒಂದು ಶಾಕ್ ಕಾದಿತ್ತು, ಆತ ಇನ್ವೆಸ್ಟ್ ಮಾಡಿದ್ದ ಕಂಪನಿ ಅಲ್ಲಿ ಮುಚ್ಚಿಹೋಗಿತ್ತು ಆ ಕಂಪನಿ ಮೋಸಮಾಡಿ ಪರಾರಿಯಾಗಿತ್ತು, ಇಷ್ಟೆಲ್ಲಾ ಆದಮೇಲೆ, ಅವನಿಗೆ ಜೀವನದಲ್ಲಿಯೇ ಸೋಲಿನಿಂದ ಮುಳಿಗಿಹೋದ ಹಾಗೆ ಬಾಸವಗಿತ್ತು. ಅವನು ಅಲ್ಪ ಸ್ವಲ್ಪ ಸೆವಿಂಗ್ ಮಾಡಿದ್ದ ಹಣವನ್ನೆಲ್ಲ ತೆಗೆದುಕೊಂಡು ಒಂದು ದಿನ ಆತ ಬೆಂಗಳೂರಿಗೆ ವಾಪಾಸ್ ಆದ, ಆದರೆ ಆತನಿಗೆ ಒಂದು ವಿಷಯ ತಿಳಿದಿರಲಿಲ್ಲ, ಅಲ್ಲಿ ಅಪ್ಪ ಅಮ್ಮ ಮತ್ತು ಮನೆ ಯಾವುದು ಇರಲಿಲ್ಲ, ಆತನ ಯೋಗಕ್ಷೇಮ ವಿಚರಿಸುವವರು ಇರಲಿಲ್ಲ.

    ಎಷ್ಟೆಲ್ಲಾ ಆದಮೇಲೆ ಆತ ಬೆಂಗಳೂರಿನಲ್ಲಿ ಒಂದುಮನೆಯನ್ನೂ ಕೊಂಡು ಕೊಳ್ಳಲು ನಿರ್ದಾರ ಮಾಡಿದ, ಆದರೆ ಒಂದು ವಿಷರ ಅವನಿಗೆ ತಿಳಿದಿರಲಿಲ್ಲ, ಆತ ಬೆಂಗಳೂರಿನಲ್ಲಿ ಇದ್ದಾಗ ಎಲ್ಲ ವಸ್ತುಗಳ ಬೆಲೆಯೂ ತುಂಬ ಕಡಿಮೆ ಇತ್ತು, ಆದರೆ ಈಗ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದ್ದವು, ಆತನು ಕನಸಿನಲ್ಲೂ ಉಹಿಸಿರದಷ್ಟು ಎತ್ತರಕ್ಕೆ ಹೋಗಿದ್ದವು, ೧೫-೧೬ ವರ್ಷಗಳ ಹಿಂದೆ ನೋಡಿದ್ದ ಬೆಂಗಳೂರು ಈಗ ಆಗಿರಲಿಲ್ಲ, ಹೇಗೂ ಆತನು ಕೂಡಿಟ್ಟಿದ್ದ ಹಣದಲ್ಲಿ ಒಂದು ಮನೆಯನ್ನೂ ಕೊಂಡುಕೊಳ್ಳಲು ನಿರ್ದಾರ ಮಾಡಿದ, ಆತನು ಒಂದು ಮನೆಯನ್ನೂ ಕೊಂಡುಕೊಂಡ, ನೀವು ಯೋಚಿಸಿರಬಹುದು, ಅದರಲ್ಲಿ ಏನಿದೆ ವಿಶೇಷ? ನಿಮಗೆ ಗೊತ್ತೇ? ಆತ ಎಷ್ಟು ದೊಡ್ಡ ಮನೆಯನ್ನೂ ಕೊಂಡುಕೊಂಡ ಎಂಬುದು? ಅದು ಕೇವಲ ೨ ಬೆಡ್ ರೂ ಹೌಸ್! ಆತನ ತಂದೆ ಒಂದು ಬೆಡ್ ರೂಂ ಇರುವ ಮನೆಯನ್ನೂ ಕಟ್ಟಿದ್ದರು, ಆದರೆ ತಂದೆ ಎಲ್ಲ ಸುಖ ಸಂತೋಶಗಳನ್ನು ಪರಸ್ಪರ ಹಂಚುತ್ತ ಸಂತೋಷದಿಂದ ಜೀವನ ನಡೆಸುತ್ತಿದ್ದರು, ಆದರೆ ಈತನು ಎರಡು ಬೆಡ್ ರೂಂ ಮನೆಯನ್ನೂ ಕೊಂಡುಕೊಂಡ, ಆದರೆ ಎಲ್ಲವನ್ನೂ ಕಳೆದುಕೊಂಡಿದ್ದ.

ಈತ ಇಷ್ಟೆಲ್ಲಾ ಮಾಡಿದ್ದು, ಗಳಿಸಿದ್ದು ಕಳೆದುಕೊಂಡಿದ್ದು ಕೇವಲ ಒಂದು ರೂಂ ಹೆಚ್ಚು ಇರುವ ಮನೆಯನ್ನೂ ಕೊಂಡುಕೊಳ್ಳುವ ಆದೃಷ್ಟಕ್ಕಾಗಿ! ಗೆಳೆಯರೇ ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನೀವು ಕನಸು ಕಾಣುವುದು ತಪ್ಪಲ್ಲ ಆದರೆ ನಿಮ್ಮ ಕನಸು ನನಸಾಗಿಸುವ ಹಾತುರದಿಂದ, ಇರುವ ಸಂತೋಷವನ್ನೂ ದೂರ ಮಾಡಬೇಡಿ, ಇರುವ ಸಂಬಂದಗಳನ್ನು ದೂರ ಮಾಡಿಕೊಳ್ಳಬೇಡಿ! ಮಾಡಿ ಈ ತರಹದ ಊದಾರಣೆಯಾಗಿ, ಆನಾಥರಾಗಿ ಜೀವನ ನಡೆಸಬೇಡಿ!


***************************ದಿ ಎಂಡ್ *********************************